ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತೇಕ ಬಸ್ ಸಂಚಾರ ಆರಂಭ

Last Updated 19 ಏಪ್ರಿಲ್ 2021, 4:26 IST
ಅಕ್ಷರ ಗಾತ್ರ

ರಾಯಚೂರು: ಇಲ್ಲಿನ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಭಾನುವಾರ ಬಹುತೇಕ ಬಸ್ ಸಂಚಾರ ಆರಂಭವಾಯಿತು.

ಭಾನುವಾರ ರಾಯಚೂರು ಮೂರನೇ ಡಿಪೋದಿಂದ 19 ಹಾಗೂ ಸೆಕೆಂಡ್ ಡಿಪೋದಿಂದ 8 ಬಸ್‌ಗಳು ಸೇರಿ ಶೇ 40 ರಷ್ಟು ಬಸ್‌ಗಳು ಸಂಚರಿಸಿದವು. ಹೈದರಾಬಾದ್, ಆದೋನಿ, ಮಂತ್ರಾಲಯ, ಜಿಲ್ಲೆಯ ಲಿಂಗಸುಗೂರು, ಸಿಂಧನೂರು ಮಾರ್ಗದ ಬಸ್‌ಗಳು ಸಂಚರಿಸಿದವು.

ಮಾರ್ಚ್ 7 ರಿಂದ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ತೀವ್ರ ಸಮಸ್ಯೆಗೆ ಸಿಲುಕಿದ್ದರು. ದುಪ್ಪಟ್ಟು ದರದಲ್ಲಿ ಅನಿವಾರ್ಯವಾಗಿ ಖಾಸಗಿ ವಾಹನಗಳ ಮೂಲಕ ವಿವಿಧ ಊರುಗಳಿಗೆ ತೆರಳಬೇಕಾಗಿತ್ತು. ಬಸ್‌ಗಳ ಆರಂಭದ ಬಗ್ಗೆ ಕೆಲವರಿಗೆ ಮಾಹಿತಿ ಇದ್ದ ಕಾರಣ ನಿಲ್ದಾಣಕ್ಕೆ ಬಂದರೆ ಹಲವರಿಗೆ ಸಮರ್ಪಕ ಮಾಹಿತಿ ಇರದ ಕಾರಣ ಪ್ರಯಾಣಿಕರ ಸಂಖ್ಯೆ ಎಂದಿನಂತೆ ಇರಲಿಲ್ಲ.

ಸಾರಿಗೆ ನೌಕರರ ಮುಷ್ಕರದಿಂದ ಬಸ್ ನಿಲ್ದಾಣದ ಸುತ್ತಮುತ್ತಲಿನ ವ್ಯಾಪಾರ ಮಳಿಗೆಗಳು ಹಾಗೂ ಹೋಟೆಲ್ ವ್ಯಾಪಾರದ ಮೇಲೆ
ತೀವ್ರ ಪರಿಣಾಮ ಬೀರಿತ್ತು. ಜನಸಾಮಾನ್ಯರು ಕೂಡ ನಿತ್ಯ ತೊಂದರೆ ಅನುಭವಿಸಿದರು.

ಅಲ್ಲದೇ ವಿವಿಧ ತಾಲ್ಲೂಕುಗಳಿಂದ ಬರುವ ಸ್ನಾತಕೊತ್ತರ, ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ, ಗ್ರಾಮಗಳಿಂದ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಜಿಲ್ಲಾ ಕೇಂದ್ರಕ್ಕೆ ಬರಲು ಬಸ್ ಸಂಚಾರ ಇರದ ಕಾರಣ ಬಹಳ ತೊಂದರೆಯಾಗಿತ್ತು. ಈಗ ಬಸ್ ಸಂಚಾರ ಆರಂಭದಿಂದ ನಿಟ್ಟುಸಿರು ಬಿಡುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT