1963 ರಲ್ಲಿ ಭಾರತ ವಿಕಾಸ ಪರಿಷತ್ ಸ್ಥಾಪನೆಯಾಗಿದ್ದು, ಸಾಮಾಜಿಕ–ಸಾಂಸ್ಕೃತಿಕ ಸ್ವಯಂಸೇವಾ ಸಂಘಟನೆಯಾಗಿ ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದೆ. ದೇಶಭಕ್ತಿ, ರಾಷ್ಟ್ರೀಯ ಏಕತೆ ಹಾಗೂ ಸಮಗ್ರತೆಯ ಭಾವವನ್ನು ಜನರಲ್ಲಿ ಮೂಡಿಸುತ್ತಿದೆ. ಸ್ವಚ್ಛ, ಸಮರ್ಥ, ಸಾಂಸ್ಕೃತಿಕ ಭಾರತ ಎನ್ನುವ ಧ್ಯೇಯವಾಕ್ಯದಡಿಯಲ್ಲಿ ದೇಶವನ್ನು ಆರ್ಥಿಕವಾಗಿ ಮತ್ತು ನೈತಿಕವಾಗಿ ಗಟ್ಟಿಗೊಳಿಸುವ ಕೆಲಸ ನಿರಂತರ ನಡೆಸಲಾಗುತ್ತಿದೆ ಎಂದರು.