ರಾಯಚೂರು ಕೃವಿ ವಿಜ್ಞಾನ ವಿಶ್ವವಿದ್ಯಾಲಯದ ಕುಲಸಚಿವ ಗುತ್ತಿ ಜಂಬುನಾಥ ಅವರು ಸ್ಪರ್ಧೆಯನ್ನು ಉದ್ಘಾಟಿಸಿದರು. ಆನಂತರ ಮಾತನಾಡಿದ ಅವರು, ಚದುರಂಗದಾಟವು ಜೀವನಕ್ಕೆ ಅತಿ ಹತ್ತಿರವಾದುದು. ಚದುರಂಗದಾಟದಲ್ಲಿ ನಡೆಸುವ ದಾಳಗಳು ಆಟದಲ್ಲಿ ಎಷ್ಟು ಮಹತ್ವದ್ದಾಗಿದೆಯೋ, ಜೀವನದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಅಷ್ಟೇ ಮಹತ್ವವನ್ನು ಪಡೆದುಕೊಂಡಿರುತ್ತವೆ ಎಂದು ಹೇಳಿದರು.