ಕುಲಕುಸುಬು ಮುಂದುವರಿಸುವುದನ್ನು ಪ್ರೋತ್ಸಾಹಿಸಲು ಸರ್ಕಾರವು ಅನೇಕ ಯೋಜನೆಗಳನ್ನು ರೂಪಿಸಿದೆ. ಆದರೆ ಯೋಜನೆಗಳು ವಾಸ್ತವದಿಂದ ಎಷ್ಟು ದೂರ ಉಳಿದಿವೆ ಎಂಬುದು ದೋಭಿಘಾಟ್ನೋಡಿದರೆ ಮನವರಿಕೆ ಆಗುತ್ತದೆ. ಮೂರು ದಶಕಗಳ ಹಿಂದೆ ನಗರಸಭೆಯಿಂದ ಮಡಿವಾಳ ಸಮಾಜಕ್ಕೆ ಜಾಗ ಕೊಡಲಾಗಿದೆ. ಆದರೆ, ಅದಕ್ಕೆ ಬೇಕಾಗಿರುವ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಅಭಿವೃದ್ಧಿ ಮಾಡಿಲ್ಲ. ಮೀಸಲಾಗಿರುವ ಈ ಜಾಗಕ್ಕೆ ಆವರಣ ಗೋಡೆ, ನೀರು ಪೂರೈಕೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಮಾಡಿಕೊಡಬೇಕಿತ್ತು.