ಹಟ್ಟಿಚಿನ್ನದಗಣಿ: ಯುಗಾದಿ ಹಬ್ಬದ ಮರುದಿನ ಕರಿ ನಿಮಿತ್ತ ಪಟ್ಟಣದ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಭಾನುವಾರ ಸಡಗರ ಸಂಭ್ರಮದಿಂದ ಬಣ್ಣ ಸಿಡಿಸಿಕೊಂಡು ಹೋಳಿ ಆಚರಿಸಿದರು.
ಯುವಕರು, ಮಕ್ಕಳು ಹಾಗೂ ಮಹಿಳೆಯರು ಸೇರಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸುವ ಮೂಲಕ ಹಬ್ಬವನ್ನು ಮತ್ತಷ್ಟು ರಂಗೇರುವಂತೆ ಮಾಡಿದರು.
ಬೆಳಿಗ್ಗೆಯಿಂದಲೇ ಹಬ್ಬದ ವಾತರವಣ ಮನೆ ಮಾಡಿತ್ತು. ಯುವಕರು ಬೈಕ್ನೊಂದಿಗೆ ಪಟ್ಟಣದಲ್ಲಿ ಸಂಚರಿಸಿ ಸ್ನೇಹಿತರೊಂದಿಗೆ ಬಣ್ಣ ಎರಚಿ ಸಂಭ್ರಮಿಸಿದರು. ಈ ವರ್ಷ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಇಲ್ಲದ ಕಾರಣ, ಸ್ನಾನಕ್ಕಾಗಿ ನದಿಯತ್ತ ಹೋಗುವವರು ಇರಲಿಲ್ಲ.