ಈಗಾಗಲೇ ಅನಧಿಕೃತ ನೀರಾವರಿಗೆ ಬಳಸುತ್ತಿರುವ ವಿದ್ಯುತ್ ಪರಿವರ್ತಕ ಕುರಿತಂತೆ ಪರಿಶೀಲನೆ ನಡೆಸಿ ಹಾಕಿಕೊಂಡಿರುವ ವಿದ್ಯುತ್ ಲೈನ್ಗಳನ್ನು ಕಿತ್ತು ಹಾಕಿ, ಮುಖ್ಯ ಕಾಲುವೆಯ ಎಡ ಹಾಗೂ ಬಲಭಾಗದಲ್ಲಿ ಬಳಸುತ್ತಿರುವ ಟ್ರಾನ್ಸ್ಫಾರ್ಮರ್ಗಳನ್ನು ತೆರವುಗೊಳಿಸಿ. ಉಳಿದಂತೆ ಎಲ್ಲಾ ರೈತರಿಗೆ ನೋಟಿಸ್ ಜಾರಿ ಮಾಡಿ, ರೈತರು ತಾವಾಗಿಯೇ ಲೈನ್ಗಳನ್ನು ತೆಗೆದು ಹಾಕದಿದ್ದರೆ ಇಲಾಖೆಯಿಂದಲೇ ಕಿತ್ತು ಒಗೆಯಿರಿ. ಯಾವುದೇ ಪಂಪ್ಸೆಟ್ಗಳು ಹಾಗೂ ವಿದ್ಯುತ್ ಲೈನ್ಗಳು ತಲೆ ಎತ್ತದಂತೆ ನೋಡಿಕೊಳ್ಳಿ ಎಂದು ಜೆಸ್ಕಾಂನ ಸಿಂಧನೂರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ದಾವಲಸಾಬ್, ಕೆಂಚಪ್ಪ ಅವರಿಗೆ ಸೂಚಿಸಿದರು.