ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಳ ವಿ.ನಾಯಕ ಮಾತನಾಡಿ, ಜಿಲ್ಲೆಯಲ್ಲಿ ಮೂರು ಬಯಲು ರಂಗಮಂದಿರ ನಿರ್ಮಾಣಕ್ಕೆ ಅನುದಾನ ₹ 12ಲಕ್ಷ ಬಿಡುಗಡೆಯಾಗಿದೆ. ದೇವಸುಗೂರು, ಮಸ್ಕಿ ತಾಲ್ಲೂಕಿನ ಹಸಮಕಲ್, ಸಿಂಧನೂರಿನ ಯಾಪಲಪರ್ವಿ, ಮಸ್ಕಿಯ ಮಾಡ ಸಿರವಾರ ದಲ್ಲಿ ಈಗಾಗಲೇ ಎರಡು ಕಡೆ ಸ್ಥಳ ವೀಕ್ಷಣೆ ಮಾಡಿ ಕಾಮಗಾರಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇನ್ನೂ ಒಂದು ಕಾಮಗಾರಿಯಲ್ಲಿ ಸ್ಥಳದ ಸಮಸ್ಯೆಯಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.