ಬಳಗಾನೂರು, ಮಾನ್ವಿ, ಯರಗೇರಾ, ಇಡಪನೂರು, ಮಂತ್ರಾಲಯಂ, ಕವಿತಾಳ, ಹಚ್ಚೊಳ್ಳಿ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಲಾಗಿದ್ದು, ಅರ್ಚಕರ ದೇಹ ಪತ್ತೆಯಾದರೆ ಪರಿಶೀಲಿಸಿ ತಕ್ಷಣವೇ ತಿಳಿಸುವಂತೆ ಸೂಚಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು. ನಾಳೆ ನೀರಿನ ಮಟ್ಟ ಕಡಿಮೆಯಾ ಗುವ ಸಾಧ್ಯತೆ ಇದೆ. ನಾಳೆಯೂ ತೆಪ್ಪ ಹಾಗೂ ಬೋಟ್ನಿಂದ ಶೋಧ ಕಾರ್ಯಾಚರಣೆ ನಡೆಸಲಾಗುವುದು ಎಂದು ಪಿಐ ಉಮೇಶ ಕಾಂಬಳೆ ತಿಳಿಸಿದರು.