ಸಿಯಾತಾಲಾಬ್ ನಿವಾಸಿಗಳಾದ ಗೋರಾ ಮಾಸೂಮ್, ರಿಯಾಜ್, ಸೈಯದ್ ಅಪ್ಸರ್, ಮೊಹ್ಮದ್ ಯಾಸೀನ್, ಅಜಿಮುದ್ದೀನ್ ಮತ್ತು ಕಾಶಿನಾಥ ಬಂಧಿತ ಆರೋಪಿಗಳು. ಬಚ್ಚಿಟ್ಟಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಿಕೊಳ್ಳಲು ಹೋಗಿದ್ದ ವೇಳೆ ಆರೋಪಿಗಳಾದ ರಿಯಾಜ್ ಮತ್ತು ಸೈಯದ್ ಅಜಮೀನ್ ಅವರು ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಇಬ್ಬರ ಕಾಲಿಗೂ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿ ಗಾಯಗೊಳಿಸಿದ್ದಾರೆ. ಘಟನೆಯಲ್ಲಿ ಕಾನ್ಸ್ಟೇಬಲ್ಗಳಾದ ಚಂದ್ರಕಾಂತ ಮತ್ತು ಯಲ್ಲಪ್ಪ ಅವರ ಕೈಗಳಿಗೆ ಮಾರಕಾಸ್ತ್ರಗಳು ತಗುಲಿವೆ. ಗಾಯಗೊಂಡವರನ್ನೆಲ್ಲ ಚಿಕಿತ್ಸೆಗಾಗಿ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್ ನಿಕ್ಕಂ ತಿಳಿಸಿದ್ದಾರೆ.