ಉಭಯ ಪಕ್ಷಗಳ ವಕೀಲರು ಹಾಜರಾದರೆ ಮಾತ್ರ ವಿಚಾರಣೆ ನಡೆಯುವುದರಿಂದ ಕಕ್ಷಿದಾರರು ಯಾವುದೇ ರೀತಿಯ ಅತಂಕಪಡುವ ಆಗತ್ಯವಿಲ್ಲ. ವಕೀಲರು ಹಾಗೂ ಕಕ್ಷಿದಾರರು ಯಾವುದೇ ಪ್ರಕರಣದಲ್ಲಿ ಹಾಜರಾಗದೇ ಇದ್ದಲ್ಲಿ ಹೈಕೋರ್ಟ್ ನಿರ್ದೇಶನದ ಆದೇಶದ ಹಿನ್ನೆಲೆ ವ್ಯತಿರಿಕ್ತ ಆದೇಶ ನೀಡುವುದಿಲ್ಲ ಎಂಬ ಭರವಸೆಯೊಂದಿಗೆ ಕಲಾಪದಿಂದ ದೂರವಿರಲು, ತುರ್ತು ಸಂದರ್ಭ ಹೊರತು ಪಡಿಸಿ ಕಕ್ಷಿದಾರರಿಗೆ ನ್ಯಾಯಾಲಯಕ್ಕೆ ಹಾಜರಾಗದಂತೆ ಸೂಚಿಸಲು ವಕೀಲರ ಸಂಘ ನಿರ್ಣಯಿಸಿದೆ.