ಹೊಸಪೇಟೆ (ಶಕ್ತಿನಗರ): ಮನ್ಸಲಾಪುರ ಗ್ರಾಮ ಪಂಚಾಯಿತಿ ಪಿಡಿಒ ಅನ್ನಪೂರ್ಣ ನೇತೃತ್ವದ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡವು ಟಂಟಂ ವಾಹನಗಳ ಮೂಲಕ ಹೊಲಗಳಿಗೆ ತೆರಳುತ್ತಿದ್ದ ಜನರನ್ನು ತಡೆದು ಅವರ ಮನವೊಲಿಸಿ ಕೋವಿಡ್ ಲಸಿಕೆ ಹಾಕಿತು.
ಕೋವಿಡ್ ಲಸಿಕೆ ಮಹಾಮೇಳವನ್ನು ಯಶಸ್ವಿಗೊಳಿಸಲು ಜಿಲ್ಲಾಡಳಿತ ನೀಡಿರುವ ಸೂಚನೆಯನ್ನು ಪರಿಪಾಲನೆ ಮಾಡುತ್ತಿರುವ ಮನ್ಸಲಾಪುರ ಗ್ರಾಮ ಪಂಚಾಯಿತಿ ವತಿಯಿಂದ ಹೊಸಪೇಟೆ ಗ್ರಾಮದಲ್ಲಿ ಶನಿವಾರ ವಿವಿಧ ಇಲಾಖೆಗಳ ತಂಡವು, ಗ್ರಾಮಗಳಲ್ಲಿ ಜನರ ಮನವೊಲಿಸುವ ಪ್ರಯತ್ನ ಮುಂದುವರೆಸಿದ್ದಾರೆ.
ಬೈಕ್, ಆಟೊಗಳಲ್ಲಿ ತೆರಳುತ್ತಿದ್ದವರನ್ನು ನಿಲ್ಲಿಸಿ, ಲಸಿಕೆ ಹಾಕಿಸಿ ಕೊಳ್ಳದವರಿಗೆ ಮನವೊಲಿಸಿ ಲಸಿಕೆ ಹಾಕಿಸಲಾಯಿತು. ಗ್ರಾಮ ಪಂಚಾಯಿತಿ ಪಿಡಿಒ ಅನ್ನಪೂರ್ಣ, ಗ್ರಾಮ ಪಂಚಾಯಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಆರೋಗ್ಯ ಇಲಾಖೆಯ ಸಿಬ್ಬಂದಿ ಇದ್ದರು.