ಕೆರೆಯೊಳಗಿನ ಕಲ್ಲುಬಂಡೆಯ ಮೇಲೆ ಮೊಸಳೆ ಇರುವುದನ್ನು ನೋಡಿ, ಯುವಕನೊಬ್ಬ ಛಾಯಾಚಿತ್ರ ಸೆರೆಹಿಡಿದಿದ್ದ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಕೆರೆಯ ಸುತ್ತಮುತ್ತ ಜನರು ಹೋಗಬಾರದು ಮತ್ತು ಕೆರೆಯಲ್ಲಿ ಜಾನುವಾರುಗಳು ತೆರಳದಂತೆ ಸೂಚನಾ ಫಲಕ ಹಾಕುವುದಕ್ಕೆ ಗ್ರಾಮ ಪಂಚಾಯಿತಿಗೆ ತಿಳಿಸಲಾಗಿದೆ. ಈಗಾಗಲೇ ಕೆರೆ ಪಕ್ಕದಲ್ಲಿ ಈ ಬಗ್ಗೆ ಸೂಚನಾ ಫ್ಲೆಕ್ಸ್ ಅಳವಡಿಸಲಾಗಿದೆ.