‘ಮಲ್ಕಾಪುರದ ಬಸವನ ಹಳ್ಳ ತುಂಬಿ ಹರಿದ ಪರಿಣಾಮ ಭತ್ತದ ಗದ್ದೆಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ. ಕೊಯ್ಲು ಮಾಡಿದ್ದ ಭತ್ತ ತೊಯ್ದು ಹಾಳಾಗಿದೆ. ಸತತ ಸುರಿಯುತ್ತಿರುವ ಮಳೆಯಿಂದ ನೆಲಕಚ್ಚಿದ ಭತ್ತ ಇದೀಗ ಗದ್ದೆಯಲ್ಲಿಯೇ ಮೊಳಕೆಯೊಡಿಯುತ್ತಿದೆ. ಇನ್ನೊಂದೆಡೆ ಕೊಯ್ಲು ಮಾಡಿದ್ದ ಭತ್ತದ ರಾಶಿ ಮಳೆಗೆ ತೊಯ್ದ ಕೊಳೆಯುತ್ತಿದೆ ಹೀಗಾಗಿ ಅಧಿಕ ನಷ್ಟ ಅನುಭವಿಸುಂತಾಗಿದೆ’ ಎಂದು ಮಲ್ಕಾಪುರ ಗ್ರಾಮದ ರೈತರಾದ ಬಸವರಾಜ ಬಾದರ್ಲಿ, ಭೀರಪ್ಪ, ಹನುಮಂತಪ್ಪ, ಭಾರೆಪ್ಪ ಸಾಹುಕಾರ ಮತ್ತು ಈರಣ್ಣ ತಳವಾರ ಅಳಲು ತೋಡಿಕೊಂಡರು.