ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕನಕದಾಸ ವೃತ್ತ, ಚಂದ್ರಮೌಳೇಶ್ವರ ಸರ್ಕಲ್, ಬಸನಭಾವಿ ಸರ್ಕಲ್, ಶೆಟ್ಟಿಭಾವಿ ಸರ್ಕಲ್, ನವೋದಯ ಕಾಲೇಜ್, ಡಿಸಿ ಬಂಗ್ಲೆ ಪಕ್ಕದಲ್ಲಿ ಸೇರಿದಂತೆ ವಿವಿಧೆಡೆ ಪೊಲೀಸರು ನಾಕಾಬಂದಿ ಹಾಕಿದ್ದರು. ಪಾದಚಾರಿಗಳನ್ನು ಹಾಗೂ ವಾಹನಗಳಲ್ಲಿ ಸಂಚರಿಸುತ್ತಿದ್ದವರನ್ನು ಪೊಲೀಸರು ವಿಚಾರಿಸಿ, ಮುಂದೆ ಸಂಚರಿಸುವುದಕ್ಕೆ ಅವಕಾಶ ನೀಡುತ್ತಿರುವುದು ಕಂಡುಬಂತು. ಅನಗತ್ಯ ಸಂಚಾರಿಗಳಿಗೆ ಹಾಗೂ ಮಾಸ್ಕ್ ಧರಿಸದೆ ಹೊರಬಂದಿದ್ದ ಜನರಿಂದ ದಂಡ ವಸೂಲಿ ಮಾಡಿದರು.