ಈ ಮೊದಲು ಕೃಷ್ಣಾ ಪ್ರವಾಹದಿಂದ ಮುಳುಗಡೆ ಆಗಿದ್ದ ಸೇತುವೆ ಭಾಗಶಃ ಕೊಚ್ಚಿ ಹೋಗಿತ್ತು. ದುರಸ್ತಿ ಆದ ಕೆಲವೆ ದಿನಗಳಲ್ಲಿ ಪುನಃ ಸೇತುವೆ ಮುಳುಗಡೆಯಾಗಿದೆ. ಈಗಾಗಲೆ ಸ್ಟೋನ್ ಗಾರ್ಡ್ಗಳು ಅಲ್ಲಲ್ಲಿ ಕೊಚ್ಚಿ ಹೋಗಿವೆ. ಕೆಲವೆಡೆ ಮುರಿದಿವೆ. ಕಳಪೆ ಕಾಮಗಾರಿ ನಡೆದಿದೆ ಎಂದು ಗ್ರಾಮಸ್ಥರು ಆರೋಪಿಸುತ್ತ ಬಂದಿದ್ದರು. ನೀರಿನ ರಭಸಕ್ಕೆ ಸೇತುವೆ ಕೊಚ್ಚಿ ಹೋಗುವ ಸಾಧ್ಯತೆ ಇದೆ ಎಂದು ಹಂಚಿನಾಳ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಈ ಕುರಿತು ಜಿ.ಪಂ. ಎಂಜಿನಿಯರ್ ಎಂ. ಜಯಪ್ಪ ಅವರನ್ನು ಸಂಪರ್ಕಿಸಿದಾಗ, ‘ಶೀಲಹಳ್ಳಿ ಸೇತುವೆಯ ಕೆಲ ಸ್ಟೋನ್ ಗಾರ್ಡ್ಗಳು ನೀರಿನ ರಭಸಕ್ಕೆ ಕಿತ್ತಿರುವುದು ನಿಜ. ಅದರಿಂದ ಸೇತುವೆಗೆ ಯಾವುದೇ ಹಾನಿಯಾಗದು. ಪ್ರವಾಹ ಕಡಿಮೆ ಆದ ಮೇಲೆ ಸೇತುವೆ ಪರಿಶೀಲಿಸಿ, ದುರಸ್ತಿ ಮಾಡಿಸಲಾಗುವುದು’ ಎಂದರು.