ಅಲ್ಲದೇ ನೀರಭಾವಿ ಕುಂಟಾ, ಎಲ್.ಬಿಎಸ್ ನಗರ, ಜಲಾಲ್ ನಗರ, ಡ್ಯಾಡಿ ಕಾಲೋನಿ, ಆಶ್ರಯ ಕಾಲೋನಿ, ಜಹೀರಾಬಾದ್ ಸೇರಿದಂತೆ ಹಲವು ಪ್ರದೇಶಗಳಿಗೆ ಅಧಿಕಾರಿಗಳನ್ನು ನೇಮಿಸಿ ಮನೆಗಳಿಗೆ ನುಗ್ಗಿದ ನೀರು ಜೆಸಿಬಿ, ಮೊಟರ್ ಗಳಿಂದ ಖಾಲಿ ಮಾಡಿಸಬೇಕು. ನಿರಾಶ್ರತರಿಗೆ ಊಟದ ವ್ಯವಸ್ಥೆ ಮಾಡಿ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಅಗತ್ಯ ಬಿದ್ದಲ್ಲಿ ಸಮುದಾಯ ಭವನದಲ್ಲಿ ಟೆಂಟ್ ಹಾಕಿಸಿ ನೆರವು ನೀಡಬೇಕು.