ಕೃಷಿ ಭೂಮಿ ಸ್ವಾಧೀನಕ್ಕೆ ಬೆಲೆ ನಿಗಧಿ ಪಡಿಸಬೇಕಿದ್ದು, ಸಂಬಂಧಿಸಿ ಇಲಾಖೆಗಳು ಸೂಕ್ತ ಮಾರ್ಗ ಹಾಗೂ ಸ್ವಾಧೀನ ಅವಶ್ಯಕತೆ ಕುರಿತು ಪೂರ್ವಾಭಾವಿ ಮಾಹಿತಿಯನ್ನು ಕ್ರೋಢಿಕರಿಸಬೇಕು. ರಾಯಚೂರು ನಗರಕ್ಕೆ ವರ್ತುಲ್ ರಸ್ತೆ ನಿರ್ಮಾಣಕ್ಕಾಗಿ ಯರಮರಸ್, ಚಿಕ್ಕಸೂಗೂರು, ದೇವಸೂಗೂರು ಮೂಲಕ ಮಂತ್ರಾಲಯ ರಸ್ತೆಗೆ ಜೋಡಿಸುವ ಲಿಂಕ್ ರಸ್ತೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆಯಿಂದ ಈಗಾಗಲೇ ನಡೆಸಿರುವ ಸಮೀಕ್ಷೆಯ ಪ್ರಕಾರವೇ ಭೂ ಸ್ವಾಧೀನಕ್ಕೆ ಅವಶ್ಯಕತೆ ಇರುವ ಮಾಹಿತಿಯನ್ನು ಸಂಗ್ರಹಿಸಬೇಕು ಎಂದು ತಿಳಿಸಿದರು.