‘ಅಡುಗೆ ಸಿಬ್ಬಂದಿ ಹಾಗೂ ಶಿಕ್ಷಕರು ಗುಣಮಟ್ಟದ ಅಡುಗೆ ತಯಾರಿಸಿಕೊಂಡು ಊಟ ಮಾಡುತ್ತಾರೆ. ಆದರೆ ನಮಗೆ ಹುಳಮಿಶ್ರಿತ ಬಿಸಿಯೂಟ ನೀಡುತ್ತಾರೆ. ಸಾಂಬಾರಿನಲ್ಲಿ, ಕಾಯಿಪಲ್ಯೆ ಹಾಗೂ ಮಸಾಲೆ ಪದಾರ್ಥಗಳು ಇರುವುದಿಲ್ಲ. ಶಿಕ್ಷಕರು ಅಡುಗೆ ಸಿಬ್ಬಂದಿ ಊಟ ಮಾಡುವ ಅನ್ನ ಹಾಗೂ ಸಾಂಬಾರಿನಲ್ಲಿ ಎಲ್ಲವೂ ಇರುತ್ತದೆ. ಮಕ್ಕಳ ಊಟದಲ್ಲಿಯೂ ಮಲತಾಯಿ ಧೋರಣೆ ಮಾಡಲಾಗುತ್ತಿದೆ’ ಎಂದು ವಿದ್ಯಾರ್ಥಿಗಳು ಆರೋಪ ಮಾಡಿದರು.