ಸಿರವಾರ: ‘ಸಮಾಜದ ಮಾನ ಮುಚ್ಚುವ ಬಟ್ಟೆ ನೇಯ್ಗೆ ಕೆಲಸದ ಜೊತೆಗೆ ವಚನಗಳನ್ನು ರಚಿಸಿ ಆ ಮೂಲಕ ಸಮಾಜವನ್ನು ತಿದ್ದಿ ನೇಕಾರ ಸಮಾಜವನ್ನು ಏಳ್ಗೆಯತ್ತಾ ಕೊಂಡೊಯ್ದ ಮಹಾನ್ ಸಂತ ಜೇಡರ (ದೇವರ) ದಾಸಿಮಯ್ಯ ಅವರು‘ ಎಂದು ನೇಕಾರ ಒಕ್ಕೂಟದ ತಾಲ್ಲೂಕು ಘಟಕದ ಗೌರವಾಧ್ಯಕ್ಷ ಈರಣ್ಣ ಗಾಳಿ ಅತ್ತನೂರು ಹೇಳಿದರು.
ಪಟ್ಟಣದ ತೇಜಸ್ ಮಾಲ್ನಲ್ಲಿ ನೇಕಾರ ಒಕ್ಕೂಟದ ತಾಲ್ಲೂಕು ಘಟಕದಿಂದ ದಾಸಿಮಯ್ಯ ಜಯಂತಿ ಅಂಗವಾಗಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮುಖಂಡ ಉಮಾಪತಿ ಚುಕ್ಕಿ, ಡಾ.ಸುನೀಲ್ ಸರೋದೆ ಜೇಡರ (ದೇವರ) ದಾಸಿಮಯ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಿದರು.
ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಮುಖ್ಯಾಧಿಕಾರಿ ಕೆ.ಮುನಿಸ್ವಾಮಿ ದಾಸಿಮಯ್ಯ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಜಯಂತಿ ಆಚರಿಸಲಾಯಿತು.