ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವವರನ್ನು ಕೆಲಕಾಲ ಕಾಯಿಸಿ ಬಿಡುತ್ತಿದ್ದಾರೆ. ನಾಳೆಯಿಂದ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡುತ್ತಿದ್ದಾರೆ. ಔಷಧಿ ಅಂಗಡಿಗಳು, ಪೆಟ್ರೊಲ್ ಬಂಕ್, ತರಕಾರಿ ಅಂಗಡಿಗಳು, ದಿನಪತ್ರಿಕೆ ಮಳಿಗೆ ಹಾಗೂ ಕಿರಾಣಿ ಅಂಗಡಿಗಳು ತೆರೆದುಕೊಂಡಿವೆ. ಆದರೆ, ಜನಸಂಚಾರ ನಿಯಂತ್ರಣ ಕಟ್ಟುನಿಟ್ಟು ಮಾಡಿರುವುದರಿಂದ ಮಳಿಗೆಗಳ ಎದುರು ಬೆರಳೆಣಿಕೆ ಜನರಿದ್ದಾರೆ.