ಲಿಂಗಸುಗೂರು: ಪಪ್ಪಾಯ,ದಾಳಿಂಬೆ, ಪೇರಲ, ಸಿತಾಫಲ ಸೇರಿದಂತೆ ವಾಣಿಜ್ಯ ಬೆಳೆಗಳ ರಕ್ಷಣೆಗೆ ಬದುವಿಗೆ ಪರದೆ, ಗಿಡಗಳಿಗೆ ಬಲೆ ಮತ್ತು ಸೀರೆ ಮುಚ್ಚುವುದು ಸೇರಿದಂತೆ ವಿವಿಧ ನಮೂನೆಯ ರಕ್ಷಣಾ ಕಾರ್ಯ ನಡೆಸಿದ್ದು ನೋಡಿದ್ದೇವು. ಆದರೆ, ದಾಳಿಂಬೆ ಬೆಳೆಯ ರಕ್ಷಣೆಗೆ ತೋಟದ ತುಂಬೆಲ್ಲಾ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದು ರೈತರನ್ನು ಹುಬ್ಬೇರಿಸುವಂತೆ ಮಾಡಿದೆ.