ಮರಗಳ ಸಂರಕ್ಷಣೆ (ತಿದ್ದುಪಡಿ) ಮಸೂದೆ:ರೈತರು ಬೆಳೆಯುವ ಕೆಲವು ಮರಗಳ ಪ್ರಬೇಧಗಳನ್ನು ಅನುಮತಿ ಪಡೆದು ಕಡಿಯುವುದಕ್ಕೆ ವಿನಾಯಿತಿ ನೀಡುವ ಉದ್ದೇಶದಿಂದ ಕರ್ನಾಟಕ ಮರಗಳ ಸಂರಕ್ಷಣೆ ಕಾಯ್ದೆ (ತಿದ್ದುಪಡಿ) ಮಸೂದೆ ಮಂಡಿಸಲಾಗಿದೆ. ಕರ್ನಾಟಕ ಮರಗಳ ಸಂರಕ್ಷಣೆ ಕಾಯ್ದೆ 1976ಕ್ಕೆ ತಿದ್ದುಪಡಿ ತರುವ ಮೂಲಕ ಅಡಿಕೆ, ಅಕೇಶಿಯಾ ಪ್ರಬೇಧಗಳು, ದೊಡ್ಡ ಬೇವು, ಬಾಗೇಕಾಯಿ ಮರ, ಗೋಡಂಬಿ, ಕ್ರಿಸ್ಮಸ್ ಟ್ರೀ, ನಿಂಬೆ, ಕಿತ್ತಲೆ, ತೆಂಗು, ಕಾಫಿ, ಮೇ-ಪ್ಲವರ್ ಮತ್ತಿತರ ಕೆಲವು ಜಾತಿಯ ಮರಗಳನ್ನು ಕಡಿಯಲು ಅನುಮತಿ ಪಡೆಯುವ ಅಗತ್ಯ ಇಲ್ಲ.