ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಪರಿಮಳ ಪ್ರಸಾದ ಹೆಸರಿನಲ್ಲಿ ಹಾಗೂ ನಕಲಿ ವೆಬ್ಸೈಟ್ ಸೃಷ್ಟಿಸಿ ನೆರವಿನ ನೆಪದಲ್ಲಿ ಭಕ್ತರಿಗೆ ವಂಚನೆ ಮಾಡಲಾಗುತ್ತಿದೆ.
ಕೋವಿಡ್ ನಂತರ ಅರ್ಚಕರು, ಬಡವರು ಸಂಕಷ್ಟಕ್ಕೀಡಾಗಿದ್ದಾರೆ ಎಂದು ನಂಬಿಸಿ ನಕಲಿ ವೆಬ್ಸೈಟ್ ಸೃಷ್ಟಿಸಿ, ನೆರವಿಗಾಗಿ ಹಣ ಹಾಕುವಂತೆ ಮನವಿ ಮಾಡಿ ನೆರವು ಪಡೆಯಲಾಗುತ್ತಿದೆ. ಮಂತ್ರಾಲಯ ಮಠದ ಅಭಿವೃದ್ಧಿಗಾಗಿ ಭಕ್ತರು ಫೋನ್ ಪೇ ಮಾಡುವಂತೆ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲೂ ಸಂದೇಶ ಹರಿಬಿಡಲಾಗಿದೆ.
‘ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಮಂತ್ರಾಲಯ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ’ ಎಂದು ಶ್ರೀಮಠದ ವ್ಯವಸ್ಥಾಪಕ ಶ್ರೀನಿವಾಸರಾವ್ ತಿಳಿಸಿದ್ದಾರೆ.