ಸಿಂಧನೂರು: ತಾಲ್ಲೂಕಿನ ಹೊಗರನಾಳ ಗ್ರಾಮದಲ್ಲಿ ರೈತರೊಬ್ಬರು ಹಾವು ಕಚ್ಚಿ ಮೃತಪಟ್ಟಿದ್ದಾರೆ.
ಅಮರಪ್ಪ ಪಾಮಯ್ಯ ನಾಯಕ (52) ಮೃತರು.
ಹೊಲದಲ್ಲಿರುವ ಗುರೆಳ್ಳು ರಾಶಿಗೆ ರಾತ್ರಿ ತಾಡಪಾಲ್ ಮುಚ್ಚುತ್ತಿದ್ದಾಗ ಹಾವು ಕಚ್ಚಿದೆ. ಬಳಿಕ ರೈತರನ್ನು ಸಿಂಧನೂರಿನ ಆಸ್ಪತ್ರೆಗೆ ಕರೆ ತರಲಾಗಿದೆ. ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮೃತ ರೈತರ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಶಿವನಗೌಡ ಗೊರೇಬಾಳ ಒತ್ತಾಯಿಸಿದ್ದಾರೆ.