ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ): ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ರೋಡಲಬಂಡ ಕ್ರಾಸ್ ಬಳಿ ಬೈಕ್ಗೆಸರ್ಕಾರಿ ಬಸ್ ಡಿಕ್ಕಿಯಾಗಿ ತಂದೆ- ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ವಂದಲಿ ಹೊಸೂರು ಗ್ರಾಮದ ರಮೇಶ (45) ಹಾಗೂ ಅಮರೇಶ (12) ಮೃತ ತಂದೆ ಮಗ. ಹೋಲದಲ್ಲಿ ಕೆಲಸ ಮಾಡಿ ಬೈಕ್ ಮೂಲಕ ಮುಖ್ಯ ರಸ್ತೆ ಗೆ ಬರುವಾಗ ಹಟ್ಟಿ ಪಟ್ಟಣದಿಂದ ಬರುತ್ತಿದ್ದ ಸಾರಿಗೆ ಬಸ್ ಬೈಕಿಗೆ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.