ರಾಜ್ಯಮಟ್ಟದಲ್ಲಿ ಪ್ರಥಮ ಚಿಕಿತ್ಸೆ ತರಬೇತಿ ಪಡೆದ ಡಾ.ರಾಕೇಶಕುಮಾರ ಜಿ. ನಾಯ್ಕ, ಮರುಳ ಸಿದ್ದೇಶ್ವರ ದೇವೂರು, ವಿಜಯಕುಮಾರ ಎ.ಡಿ., ಕಿರಣ ಹೆಗಡೆ, ಆಸೀಯಾ ಅಂಜುಮ್ ಹಾಗೂ ಸುಚರಿತಾ ಎಸ್ ಹಕ್ಕಿ ಅವರು ಪ್ರಶಿಕ್ಷಣಾರ್ಥಿಗಳಿಗೆ ಎದೆನೋವು, ಹೃದಯಾಘಾತ, ಪ್ರಜ್ಞಾಹೀನತೆ, ಪಾರ್ಶ್ವವಾಯು, ವಿಶಸೇವನೆ, ನೀರಿನಲ್ಲಿ ಮುಳುಗುವುದು, ಗಾಯ ನಿರ್ವಹಣೆ, ರಕ್ತಸ್ರಾವ ತಡೆಗಟ್ಟುವುದು, ವಿದ್ಯುತ್ ಸ್ಪರ್ಶ, ನಾಯಿ-ಹಾವು ಕಡಿತದಂತಹ ಅನಿರೀಕ್ಷಿತ ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ನೀಡುವ ಕುರಿತು ಪ್ರಾತ್ಯಕ್ಷಿಕೆ ಮೂಲಕ ಅರಿವು ಮೂಡಿಸಿದರು. ಆನಂತರ ಪ್ರಮಾಣ ಪತ್ರವನ್ನು ವಿತರಿಸಲಾಯಿತು.