ಕೈಗಾರಿಕೆಗಳ ಸ್ಥಾಪನೆಗೆ ಪೂರಕವಾದ ಕೈಗಾರಿಕೆ ನೀತಿ ರೂಪಿಸುವುದು ಅಗತ್ಯವಾಗಿದ್ದು, ಈಗಾಗಲೇ ಕೈಗಾರಿಕೆ ಸಚಿವರನ್ನು ಭೇಟಿ ಮಾಡಿ ಬಡ್ಡಿದರ ಇಳಿಕೆ, ₹ 3 ಸಾವಿರ ಕೋಟಿ ಅನುದಾನ ಒದಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಮಂಡಿಸಲಾಗಿದೆ. ದೇಶದಲ್ಲಿ ಆಮದು ಹಾಗೂ ರಫ್ತಿನಲ್ಲಿ ಆಗುತ್ತಿರುವ ತೊಂದರೆಗಳನ್ನು ದೇಶದ ಹಿತಾಸಕ್ತಿ ಪರಿಗಣಿಸಿ ಸರಿಪಡಿಸಬೇಕು. ಕನಿಷ್ಠ ವೇತನ ಜಾರಿ ವಿಷಯದಲ್ಲೂ ಎಲ್ಲ ರಾಜ್ಯಗಳಿಗೆ ಒಂದೇ ನೀತಿ ಜಾರಿ ಮಾಡಬೇಕು. ಭೂಮಿಯ ಬೆಲೆ ಇಳಿಯಬೇಕು. ಅದಕ್ಕಾಗಿ ಸರ್ಕಾರಕ್ಕೆ ಯಾವುದೇ ಲಾಭ ಅಥವಾ ನಷ್ಟವಾಗದಂತೆ ಕೈಗಾರಿಕೆಗಳಿಗೆ ಭೂಮಿ ನೀಡಬೇಕು. ಸರ್ಕಾರ ಭೂ ಸ್ವಾಧೀನದಲ್ಲೂ ಲಾಭ ಮಾಡಿಕೊಳ್ಳುವುದನ್ನು ಬಿಡಬೇಕು. ಬಹಳಷ್ಟು ಸುಧಾರಣೆಗಳನ್ನು ಮಾಡಬೇಕಿದ್ದು, ಕೈಗಾರಿಕಾ ಸ್ನೇಹಿ ನೀತಿ ರೂಪಿಸಬೇಕು ಎಂದು ಒತ್ತಾಯಿಸಿದರು.