ರಾಯಚೂರು–ಕಲಬುರ್ಗಿ ಮಾರ್ಗದಲ್ಲಿರುವ ದೇವದುರ್ಗ ತಾಲ್ಲೂಕಿನ ಹೂವಿನಹೆಡ್ಗಿ ಸೇತುವೆ ಇನ್ನೂ ಜಲಾವೃತವಾಗಿದೆ. ಲಿಂಗಸುಗೂರು ತಾಲ್ಲೂಕಿನ ನಡುಗಡ್ಡೆಗಳಿಗೆ ಸಂಪ ರ್ಕಿಸುವ ಜಲದುರ್ಗ ಸೇತುವೆ ಮತ್ತು ಯರಗೋಡಿ ಸೇತುವೆ ಮೇಲಿನ ನೀರು ತೆರವಾಗಿದೆ. ಆದರೆ, ಜಲದುರ್ಗ ಸೇತುವೆ ಹಾಳಾಗಿದ್ದು, ಭಾರಿ ವಾಹನಗಳ ಸಂಚಾರ ನಿಷೇಧಿಸಲಾಗಿದೆ.