ಮನೆ, ಸಿ.ಸಿ ರಸ್ತೆ ನಿರ್ಮಾಣ, ಅಭಿವೃದ್ಧಿ ಹೆಸರಲ್ಲಿ ಎಲ್ಲೆಂದರಲ್ಲಿ ಗುಂಡಿ ತೋಡಿರುವ ಚಿತ್ರಣಗಳು ಸಾಮಾನ್ಯ. ಆದರೆ, ಕೆಲ ದಿನಗಳ ಹಿಂದೆ ಕೊಡೆಕಲ್ಲನ ಭಕ್ತರೊಬ್ಬರು ಅವನತಿ ಹಂತದಲ್ಲಿರುವ ಸಂಗಮನಾಥನ ಕರ್ತೃ ಗದ್ದುಗೆ ಹಾಗೂ ದೇವಸ್ಥಾನ ಆವರಣದ ಗೋಡೆಗಳ ಗರ್ಚು ಕಿತ್ತು, ಸಿಮೆಂಟ್ ಮಾಡಲು ಮುಂದಾಗಿರುವುದು ಸುತ್ತಮುತ್ತಲ ಗ್ರಾಮಸ್ಥರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.