ಜಿಲ್ಲೆಯಲ್ಲಿ ಒಟ್ಟು 756 ಗಣೇಶ ವಿಗ್ರಹಗಳ ವಿಸರ್ಜನೆ ಆಗಿದೆ ಎಂದು ಜಿಲ್ಲಾ ಪೊಲೀಸರು ತಿಳಿಸಿದ್ದಾರೆ. ರಾಯಚೂರು ನಗರದಲ್ಲಿ ಗಣೇಶ ಮೂರ್ತಿಗಳ ವಿಸರ್ಜನೆಗೆ ಖಾಸಬಾವಿಯಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಬೃಹತ್ ಪ್ರತಿಮೆಗಳನ್ನು ವಿಸರ್ಜಿಸುವುದಕ್ಕಾಗಿ ಕ್ರೇನ್ ಯಂತ್ರಗಳನ್ನು ಇರಿಸಲಾಗಿತ್ತು. ಒಟ್ಟು ಮೂರು ಕ್ರೇನ್ಗಳ ಮೂಲಕ ನಗರಸಭೆ ಸಿಬ್ಬಂದಿಯು ವಿಸರ್ಜನೆ ಕಾರ್ಯ ಕೈಗೊಂಡಿದ್ದರು.