ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ವಿರೂಪಾಕ್ಷ ಮೂರ್ತಿ ‘ಕೆಲ ದಿನಗಳ ನಂತರ ಆ ಸ್ಥಳವನ್ನು ಆರು ನಿವೇಶನಗಳನ್ನಾಗಿ ವಿಂಗಡಿಸಿ ಕೆಲವರು ಆಶ್ರಯ ಪಡೆದುಕೊಂಡಿದ್ದರು. ಅದರಲ್ಲಿ ಒಂದು ನಿವೇಶನವನ್ನು ದಾನದ ರೂಪದಲ್ಲಿ ಮುಸ್ಲಿಮರಿಗೆ ನೀಡಲಾಗಿದೆ ಎಂದು ಆ ಸಮಾಜದವರು ವಾದಿಸುತ್ತಿದ್ದಾರೆ. ಆದರೆ, ದಾಖಲೆಗಳನ್ನು ಪರಿಶೀಲಿಸಿದಾಗ ಇದು ಮುಸ್ಲಿಮ್ ಸಮಾಜಕ್ಕೆ ವರ್ಗಾವಣೆಯಾಗಿಲ್ಲ. ನಗರಸಭೆಯ ಸುಪರ್ದಿಯಲ್ಲಿಯೇ ಇದೆ‘ ಎಂದು ತಿಳಿಸಿದರು.