ರಾಯಚೂರು: ಜಿಲ್ಲೆಯ ವಿವಿಧೆಡೆ ಗ್ರಾಮಗಳಲ್ಲಿ ಸ್ಥಾಪಿಸಿದ ಶುದ್ಧ ನೀರಿನ ಘಟಕಗಳ ಪೈಕಿ ನೂರಕ್ಕೂಹೆಚ್ಚು ಸ್ಥಗಿತವಾಗಿ ವರ್ಷ ಕಳೆದರೂ, ನಿರ್ವಹಣೆ ಜವಾಬ್ದಾರಿ ಪಡೆದಿದ್ದ ಏಜೆನ್ಸಿಗಳು ದುರಸ್ತಿ ಮಾಡಲೇ ಇಲ್ಲ. ಜನರು ಅನುಭವಿಸುತ್ತಿರುವ ನೀರಿನ ತಾಪತ್ರಯ ತಪ್ಪಿಸಲು ಕೊನೆಗೂ ಮುಂದಾಗಿದ್ದು, ಘಟಕಗಳನ್ನೆಲ್ಲ ಸುಸಜ್ಜಿತ ಮಾಡಿಕೊಳ್ಳುವುದಕ್ಕೆ ಆಯಾ ಗ್ರಾಮ ಪಂಚಾಯಿತಿಗಳಿಗೆ ಸೂಚಿಸಲಾಗಿದೆ.