ಶ್ರೀರಾಘವೇಂದ್ರ ಸ್ವಾಮಿಗಳ ಮಠದಿಂದ ಅಭಿನಂದನಾ ಮತ್ತು ಅಭಿವಂದನಾ ಕಾರ್ಯಕ್ರಮವು ಪ್ರತಿದಿನ ಸಂಜೆ 7 ಗಂಟೆಗೆ ನಡೆಯಲಿದ್ದು, ವಿದ್ವಾಂಸರು, ಗಣ್ಯರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ. 14ರಂದು ಸಿರಿಮನಿ ವಿದ್ವಾನ್ ರಾಮಕೃಷ್ಣಾಚಾರ್ ಗಣಪತಿಗಳ್, 15 ರಂದು ತಿರುಪತಿಯ ಶ್ರೀನಿವಾಸ ಗಣಪತಿಗಳ್, 16ರಂದು ರಾಯಚೂರಿನ ಮುರಳೀಧರಾಚಾರ್ ಗಲಗಲಿ, 17ರಂದುಬೆಂಗಳೂರಿನ ಮೋಹನಾಚಾರ್, 18ರಂದು ಬಿರದಹಳ್ಳಿಯ ಕೃಷ್ಣಾಚಾರ್,19ರಂದು ತಿರುಪತಿಯ ಡಾ.ಶ್ರೀಪಾದ ಸತ್ಯನಾರಾಯಣಮೂರ್ತಿ ಅವರನ್ನು ಸನ್ಮಾನಿಸಲಾಗುತ್ತಿದೆ.