ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಪೆನಿಯ ನಿರ್ದೇಶಕ ಸುರೇಶಕುಮಾರ ರಾಜಸ್ತಾನದವರು. ರಾಜ್ಯದಲ್ಲಿ ಯಾವುದೇ ದಾಖಲಾತಿಗಳಿಲ್ಲ. ಆದರೂ, ಕಂಪೆನಿಯ ಹೆಸರಿನಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಸ್ನೇಹಿತರು ಹಾಗೂ ಸಂಬಂಧಿಕರಿಗೆ ಮಾತ್ರ ಸ್ಕೀಮ್ ಎಂದು ನಮೂದಿಸಿ ಶೇ 90 ರಷ್ಟು ಹೊರಗಿನವರಿಗೆ ಸದಸ್ಯತ್ವ ನೀಡಿ ಹಣ ಲಪಟಾಯಿಸಿದ್ದಾರೆ. ಕೂಡಲೇಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮ ಜರುಗಿಸಿ ವಂಚನೆಗೊಳಗಾದವರಿಗೆ ನ್ಯಾಯ ದೊರಕಿಸಬೇಕು ಎಂದು ಹೇಳಿದರು.