ಜಾಲಹಳ್ಳಿ (ರಾಯಚೂರು ಜಿಲ್ಲೆ): ದೇವದುರ್ಗ ತಾಲ್ಲೂಕಿನ ತಿಂಥಣಿ ಬ್ರಿಡ್ಜ್ ಸಮೀಪದ ಕನಕಗುರು ಪೀಠ ಹಾಲುಮತ ಕೇಂದ್ರದಲ್ಲಿ ಹಾಲುಮತ ಸಂಸ್ಕೃತಿ ವೈಭವದ ಕಾರ್ಯಕ್ರಮಗಳನ್ನು ಸರಳ ರೀತಿಯಲ್ಲಿ ಬುಧವಾರ ಆರಂಭಿಸಲಾಯಿತು.
ಕುರುಬ ಸಮಾಜಕ್ಕೆ ಎಸ್ ಟಿ ಮೀಸಲು ಹೋರಾಟ ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಅವರು ಧ್ವಜಾರೋಹಣ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು.
ಪೀಠದ ಮುಖ್ಯಸ್ಥ ಸಿದ್ದರಾಮಾನಂದ ಪುರಿ ಸ್ವಾಮಿ ಹಾಗೂ ಕೆ.ಆರ್.ನಗರ ಕನಕಗುರು ಪೀಠದ ಮುಖ್ಯಸ್ಥ ಶಿವಾನಂದ ಮಹಾಸ್ವಾಮಿ ನೇತೃತ್ವದಲ್ಲಿ ಕಾರ್ಯಕ್ರಮಗಳು ಆರಂಭವಾಗಿವೆ.
ಕೋವಿಡ್ ಮೂರನೇ ಅಲೆ ವ್ಯಾಪಿಸುತ್ತಿರುವುದರಿಂದ ಆಹ್ವಾನಿತ ರಾಜಕೀಯ ಮುಖಂಡರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ. ಈ ಮೊದಲು ಕಾಣುತ್ತಿದ್ದ ಜನದಟ್ಟಣೆ ಕೂಡಾ ಇಲ್ಲ. ಜನವರಿ 14 ರ ವರೆಗೂ ಕಾರ್ಯಕ್ರಮಗಳೆಲ್ಲ ಸರಳವಾಗಿ ನಡೆಯಲಿವೆ.