<p><strong>ಹಟ್ಟಿ ಚಿನ್ನದ ಗಣಿ:</strong> ಯಲಗಟ್ಟಾ, ರೋಡಲಬಂಡಾ ಸಮೀಪದ ಜಮೀನುಗಳಲ್ಲಿನ ವಿದ್ಯುತ್ ಕಂಬಗಳು ಬಾಗಿದ್ದು ರೈತರು ಆತಂಕದಲ್ಲೇ ಕೃಷಿ ಕಾರ್ಯದಲ್ಲಿ ತೊಡಗುವಂತಾಗಿದೆ.</p>.<p>4–5 ಕಂಬಗಳು ಅರ್ಧದಷ್ಟು ಬಾಗಿದೆ, ಒಂದು ಕಂಬ ಬೀಳುವ ಹಂತದಲ್ಲಿದ್ದು ಅಪಾಯದ ಮುನ್ಸೂಚನೆ ನೀಡುತ್ತಿವೆ.</p>.<p>ಕಂಬಗಳು ಬಾಗಿರುವ ಕಾರಣ ವಿದ್ಯುತ್ ತಂತಿಗಳು ನಿಗದಿತ ಎತ್ತರಕ್ಕಿಂತ ಕೆಳಗಡೆ ಜೋತಾಡುತ್ತಿರುವುದರಿಂದ ಜಮೀನಿನಲ್ಲಿ ಕೆಲಸ ಮಾಡುವಾಗ ಸಮಸ್ಯೆ ಎದುರಾಗಿದೆ ಎಂದು ರೈತರು ತಿಳಿಸಿದ್ದಾರೆ.</p>.<p>ಬಾಗಿದ ಕಂಬಗಳನ್ನು ಸರಿಯಾಗಿ ನಿಲ್ಲಿಸಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಹಲವು ಸಲ ತಿಳಿಸಿದರೂ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಮಳೆ ಆರಂಭಕ್ಕೂ ಮುನ್ನವೇ ಸರಿಪಡಿಸಬೇಕು, ಮಳೆ ಬಂದಾಗ ಜಮೀನಿನಲ್ಲಿ ವಾಹನ ಹೋಗಲು ಪರದಾಡಬೇಕಾಗುತ್ತದೆ ಅದಕ್ಕಾಗಿ ಮೇಲಧಿಕಾರಿಗಳು ಇತ್ತ ಕಡೆ ಗಮನಹರಿಸಲಿ ಎನ್ನುತ್ತಾರೆ ರೋಡಲಬಂಡ ಗ್ರಾಮದ ರೈತರು.</p>.<p>ಕೋಠಾ, ಮೇದಿನಾಪೂರ, ರೋಡಲಬಂಡ, ತವಗ, ನಿಲೋಗಲ್, ವೀರಾಪೂರ, ಮಾಚನೂರು ಬಂಡೆಭಾವಿ, ಗೌಡೂರು, ಗೌಡೂರು ತಾಂಡಾ, ಗ್ರಾಮಗಳಲ್ಲಿ ಬಾಗಿದ ಕಂಬಗಳು ಈ ಪ್ರದೇಶದ ರೈತರಲ್ಲಿ ಭೀತಿ ಹುಟ್ಟಿಸಿವೆ.</p>.<p>ಸಂಬಂಧಪಟ್ಟವರು ಬಾಗಿದ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು, ಜೋತು ಬಿದ್ದಿರುವ ತಂತಿಗಳನ್ನು ಎತ್ತರಕ್ಕೆ ಕಟ್ಟಬೇಕು ಎಂದು ಶಿವು ಯಲಗಟ್ಟಾ ಒತ್ತಾಯಿಸಿದ್ದಾರೆ.</p>.<div><blockquote>ಹಟ್ಟಿ ಭಾಗದಲ್ಲಿ ವಿದ್ಯುತ್ ಕಂಬಗಳು ಬಾಗಿದ ಬಗ್ಗೆ ದೂರುಗಳು ಬಂದಿವೆ. ಸರಿಪಡಿಸಲು ಅಧಿಕಾರಿಗಳಿಗೆ ಆದೇಶ ಮಾಡಲಾಗುವುದು <br></blockquote><span class="attribution">ಬೆನ್ನಪ್ಪ, ಜೆಸ್ಕಾಂ ಎಇಇ, ಲಿಂಗಸುಗೂರು</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260522-32-1457221950</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿ ಚಿನ್ನದ ಗಣಿ:</strong> ಯಲಗಟ್ಟಾ, ರೋಡಲಬಂಡಾ ಸಮೀಪದ ಜಮೀನುಗಳಲ್ಲಿನ ವಿದ್ಯುತ್ ಕಂಬಗಳು ಬಾಗಿದ್ದು ರೈತರು ಆತಂಕದಲ್ಲೇ ಕೃಷಿ ಕಾರ್ಯದಲ್ಲಿ ತೊಡಗುವಂತಾಗಿದೆ.</p>.<p>4–5 ಕಂಬಗಳು ಅರ್ಧದಷ್ಟು ಬಾಗಿದೆ, ಒಂದು ಕಂಬ ಬೀಳುವ ಹಂತದಲ್ಲಿದ್ದು ಅಪಾಯದ ಮುನ್ಸೂಚನೆ ನೀಡುತ್ತಿವೆ.</p>.<p>ಕಂಬಗಳು ಬಾಗಿರುವ ಕಾರಣ ವಿದ್ಯುತ್ ತಂತಿಗಳು ನಿಗದಿತ ಎತ್ತರಕ್ಕಿಂತ ಕೆಳಗಡೆ ಜೋತಾಡುತ್ತಿರುವುದರಿಂದ ಜಮೀನಿನಲ್ಲಿ ಕೆಲಸ ಮಾಡುವಾಗ ಸಮಸ್ಯೆ ಎದುರಾಗಿದೆ ಎಂದು ರೈತರು ತಿಳಿಸಿದ್ದಾರೆ.</p>.<p>ಬಾಗಿದ ಕಂಬಗಳನ್ನು ಸರಿಯಾಗಿ ನಿಲ್ಲಿಸಿ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಹಲವು ಸಲ ತಿಳಿಸಿದರೂ ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ಮಳೆ ಆರಂಭಕ್ಕೂ ಮುನ್ನವೇ ಸರಿಪಡಿಸಬೇಕು, ಮಳೆ ಬಂದಾಗ ಜಮೀನಿನಲ್ಲಿ ವಾಹನ ಹೋಗಲು ಪರದಾಡಬೇಕಾಗುತ್ತದೆ ಅದಕ್ಕಾಗಿ ಮೇಲಧಿಕಾರಿಗಳು ಇತ್ತ ಕಡೆ ಗಮನಹರಿಸಲಿ ಎನ್ನುತ್ತಾರೆ ರೋಡಲಬಂಡ ಗ್ರಾಮದ ರೈತರು.</p>.<p>ಕೋಠಾ, ಮೇದಿನಾಪೂರ, ರೋಡಲಬಂಡ, ತವಗ, ನಿಲೋಗಲ್, ವೀರಾಪೂರ, ಮಾಚನೂರು ಬಂಡೆಭಾವಿ, ಗೌಡೂರು, ಗೌಡೂರು ತಾಂಡಾ, ಗ್ರಾಮಗಳಲ್ಲಿ ಬಾಗಿದ ಕಂಬಗಳು ಈ ಪ್ರದೇಶದ ರೈತರಲ್ಲಿ ಭೀತಿ ಹುಟ್ಟಿಸಿವೆ.</p>.<p>ಸಂಬಂಧಪಟ್ಟವರು ಬಾಗಿದ ವಿದ್ಯುತ್ ಕಂಬಗಳನ್ನು ಸರಿಪಡಿಸಬೇಕು, ಜೋತು ಬಿದ್ದಿರುವ ತಂತಿಗಳನ್ನು ಎತ್ತರಕ್ಕೆ ಕಟ್ಟಬೇಕು ಎಂದು ಶಿವು ಯಲಗಟ್ಟಾ ಒತ್ತಾಯಿಸಿದ್ದಾರೆ.</p>.<div><blockquote>ಹಟ್ಟಿ ಭಾಗದಲ್ಲಿ ವಿದ್ಯುತ್ ಕಂಬಗಳು ಬಾಗಿದ ಬಗ್ಗೆ ದೂರುಗಳು ಬಂದಿವೆ. ಸರಿಪಡಿಸಲು ಅಧಿಕಾರಿಗಳಿಗೆ ಆದೇಶ ಮಾಡಲಾಗುವುದು <br></blockquote><span class="attribution">ಬೆನ್ನಪ್ಪ, ಜೆಸ್ಕಾಂ ಎಇಇ, ಲಿಂಗಸುಗೂರು</span></div>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260522-32-1457221950</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>