‘ಕೊಪ್ಪಳದಲ್ಲಿ ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಗೊತ್ತಾಯಿತು. ಆತ್ಮಹತ್ಯೆಗೆ ಏನು ಕಾರಣ ಎಂಬುದನ್ನು ಅಧಿಕಾರಿಗಳ ಮೂಲಕ ಕೂಡಲೇ ಮಾಹಿತಿ ಪಡೆದಿದ್ದೇನೆ. ಕೌಟುಂಬಿಕವಾಗಿ ಭೂಮಿ ಹಂಚಿಕೆ ವಿಷಯವಾಗಿ ಕಲಹ ಏರ್ಪಟ್ಟಿರುವುದು ಅವರ ಆತ್ಮಹತ್ಯೆಗೆ ಕಾರಣ. ಆದರೆ, ಅವರ ಆತ್ಮಹತ್ಯೆಗೆ ಸಾಲಬಾಧೆ ಕಾರಣ ಎಂದು ಮಾಧ್ಯಮದವರು ಕೊಡುತ್ತಿದ್ದಾರೆ. ದಯಮಾಡಿ ವಸ್ತುನಿಷ್ಠ ಸುದ್ದಿಗಳನ್ನು ಪ್ರಸಾರ ಮಾಡಬೇಕು’ ಎಂದು ಹೇಳಿದರು.