ರಾಯಚೂರು: ನಗರದ ರಿಮ್ಸ್ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ (ಮೇನ್)ರಾಯಚೂರು ವಂತಿಯಿಂದ ಮಂಗಳವಾರ ವೈದ್ಯರ ಆರೋಗ್ಯ ದಿನ ಆಚರಿಸಲಾಯಿತು.
ರಿಮ್ಸ್ ಕರೋನ ವೈರಸ್ ವಿಭಾಗದ ಮುಖ್ಯಸ್ಥ ಡಾ.ಅರುಣ್ ಮಸ್ಕಿ, ಡಾ ಅಬ್ದುಲ್ ಕಲ್ ಬಹದ್ದೂರ್ ಅವರಿಗೆ ಹೂಗುಚ್ಛ ನೀಡಿ ಗೌರವಿಸಲಾಯಿತು.
ರೋಟರಿ ಕ್ಲಬ್ ನಿರ್ದೇಶಕ ಎನ್. ಶಿವಶಂಕರ ಮಾತನಾಡಿ, ಎಲ್ಲ ಭಾಗದಲ್ಲಿ ಕೊರೊನಾ ವೈರಸ್ ಹರಡದಂತೆ ಹಗಲಿರುಳೂ ವೈದರು, ನರ್ಸ್ಗಳು ಸಚ್ಛತೆ ಸಿಬ್ಬಂದಿ ಸೇವೆ ಸಲ್ಲಿಸಿತ್ತಿದ್ದಾರೆ. ಈ ಸೇವೆ ದೇವರ ಸೇವೆ ವೈದ್ಯರ ಜೊತೆ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುವ ದಾದಿಯರ ಮತ್ತು ಶುಶ್ರೂಷಕಿಯರ ಸೇವೆಯ ಮಹತ್ವದ್ದಾಗಿದೆ ಎಂದರು.
ರಿಮ್ಸ್ ಕಾಲೇಜು ಪ್ರಿನ್ಸಿಪಾಲ್ ಡಾ.ಬಸವರಾಜ ಪಾಟೀಲ ಮಾತನಾಡಿದರು. ರಿಮ್ಸ್ ಜಿಲ್ಲಾ ಶಸ್ತ್ರ ಚಿಕಿತ್ಸೆ ಡಾ ವಿಜಯಶಂಕರ, ರೋಟರಿ ಕಾರ್ಯದರ್ಶಿ ವಿಜಯಕುಮಾರ ಸಜ್ಜನ, ರೋಟರಿ ನಿರ್ದೇಶಕ ಡಿ. ಜಿ.ಯಶವಂತ್, ಮೃತ್ಯುಂಜಯ ಮಾಚನೂರು ಇದ್ದರು.