ದೇವಸುಗೂರು, ಚಂದ್ರಬಂಡಾ, ಯರಗೇರಾ ಹೋಬಳಿಗಳಲ್ಲಿ ಹೆಚ್ಚು ಮಳೆ ಸುರಿದಿದೆ. ದೇವಸುಗೂರಿನಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿದೆ. ಶಕ್ತಿನಗರದಿಂದ ಕಾಡ್ಲೂರು ಮಾರ್ಗದಲ್ಲಿರುವ ರೈಲ್ವೆ ಕೆಳಸೇತುವೆಯಲ್ಲಿ ಭಾರಿ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಬೈಕ್ ಸವಾರರು ನೀರಿನಲ್ಲಿಯೇ ತಳ್ಳಿಕೊಂಡು ಸಂಕಷ್ಟದಲ್ಲಿ ಬರುತ್ತಿದ್ದಾರೆ.