ಗಾಂಧಿನಗರ, ಗೊರೇಬಾಳ, ಜಾಲಿಹಾಳ, ಹಂಚಿನಾಳ, ಸಾಸಲಮರಿ, ಮಲ್ಕಾಪುರ, ಬೂದಿವಾಳ, ತಿಡಿಗೋಳ, ಕುರುಕುಂದಿ, ಪಗಡದಿನ್ನಿ, ದೇವಿಕ್ಯಾಂಪ್, ಬೊಮ್ಮನಾಳ, ಕುನ್ನಟಗಿ, ಬಸಾಪುರ ಸೇರಿದಂತೆ ಎಲ್ಲ ಗ್ರಾಮಗಳಲ್ಲಿಯೂ ಭತ್ತದ ಬೆಳೆ ಸಂಪೂರ್ಣವಾಗಿ ನೆಲಕ್ಕೆ ಬಿದ್ದಿದೆ. ಈಗಾಗಲೇ ಕೊಯ್ಲೆಗೆ ಬಂದಿದ್ದ ಭತ್ತವನ್ನು ಒಂದೆರೆಡು ದಿನಗಳಲ್ಲಿ ಕಟಾವ್ ಮಾಡಬೇಕೆಂದು ರೈತರ ಯೋಚಿಸಿದ್ದರು. ಅಷ್ಟರಲ್ಲಿ ಎಡೆಬಿಡದೆ ಸುರಿದ ಮಳೆಯಿಂದ ಫಸಲಿಗೆ ಬಂದ ಬೆಳೆ ಹಾನಿಯಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.