ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮ್ರಾಜ್ಯಶಾಹಿ, ಕೋಮುವಾದ ಪ್ರತಿಪಾದಿಸುವ ಮೂಲಕ ಬಿಜೆಪಿ ದೇಶದ ಏಕತೆ ಹಾಳು ಮಾಡುತ್ತಿದೆ. ಸಂಘ ಪರಿವಾರವು ರಾಷ್ಟ್ರೀಯತೆ, ದೇಶಪ್ರೇಮದ ಬಗ್ಗೆ ಹೇಳುತ್ತವೆ. ಆದರೆ, ಬಿಜೆಪಿ ಕಾಶ್ಮೀರಕ್ಕೆ ನೀಡಿರುವ 370 ಕಾಯ್ದೆಯ ವಿಶೇಷ ಸ್ಥಾನಮಾನ ರದ್ದುಪಡಿಸುವ ವಿಷಯವನ್ನು ಪ್ರಣಾಳಿಕೆಯಲ್ಲಿ ಸೇರಿಸುವ ಮೂಲಕ ಹೊಸ ಸಮಸ್ಯೆ ಸೃಷ್ಟಿಸಲು ಹೊರಟಿದೆ ಎಂದು ದೂರಿದರು.