ರಾಯಚೂರು ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆಗಳಾದ ಮಾವು, ತರಕಾರಿ, ಮೊಸಂಬಿ, ಬೆಳೆಗಳಿದ್ದು ಇವುಗಳಲ್ಲಿ ಜೇನು ಸಾಕಾಣಿಕೆ ಮಾಡಬಹುದಾಗಿದೆ. ಇದಕ್ಕೆ ಇಲಾಖೆಯ ಸಹಾಯಧನ ನೀಡಲಾಗುತ್ತಿದೆ. ಪ್ರತಿ ಫಲಾನುಭವಿಗೆ ಎರಡು ಜೇನು ಪೆಟ್ಟಿಗೆಗಳನ್ನು ಖರೀದಿಸಲು ಅವಕಾಶವಿದೆ. ಶೇ 75 ರಷ್ಟು ಸಹಾಯಧನ ಲಭ್ಯವಿದೆ. ಭೂಮಿ ಹೊಂದಿರುವ ರೈತರು ಹಾಗೂ ನಗರ ಪ್ರದೇಶದ ಹವ್ಯಾಸಿ ಜೇನು ಸಾಕಾಣಿಕೆದಾರರು ಇದರ ಲಾಭ ಪಡೆದುಕೊಳ್ಳಬಹುದು ಎಂದು ತಿಳಿಸಿದರು.