ರಸ್ತೆ ಪಕ್ಕದ ತಳ್ಳುಬಂಡಿಗಳಲ್ಲಿ ಬಿಸಿಬಿಸಿ ಚಹಾ ಗುಟುಕಿಸಲು ಜನರು ತವಕದಿಂದ ಮುಗಿಬೀಳುತ್ತಿದ್ದಾರೆ. ಶುಕ್ರವಾರ ಸಂಜೆ ವೇಳೆ ಭಜ್ಜಿ ಖರೀದಿಗೂ ಜನರು ಸರದಿ ಕಾಯುತ್ತಿರುವುದು ಸ್ಟೇಷನ್ ರಸ್ತೆ, ಚಂದ್ರಮೌಳೇಶ್ವರ ವೃತ್ತ, ಎಟಿಎಂ ವೃತ್ತ, ಶೆಟ್ಟಿಭಾವಿ ಚೌಕ್, ತೀನ್ಕಂದಿಲ್, ಲಿಂಗಸುಗೂರು ಮಾರ್ಗ ಹಾಗೂ ವಾಸವಿ ನಗರದಲ್ಲಿ ಇಳಿಸಂಜೆ ಸಾಮಾನ್ಯವಾಗಿತ್ತು. ಆದರೆ, ರಾತ್ರಿಯಾಗುತ್ತಿದ್ದಂತೆ ತುಂತುರು ಮಳೆ ಆರಂಭವಾಗಿದ್ದರಿಂದ ಭಜ್ಜಿ ಖರೀದಿಗೂ ಜನರು ಬರಲಿಲ್ಲ.