ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಶಾಸಕರು, ಸಂಸದರು ನಡೆಸಿದ್ದಾರೆ. ಸಭೆಯ ತೀರ್ಮಾನದಂತೆ ನವೆಂಬರ್ 23ರಿಂದ ಡಿಸೆಂಬರ್ 12ರವರೆಗೆ ನೀರಾವರಿಗೆ ನೀರು ಸ್ಥಗತಗೊಳಿಸಲು ನಿರ್ಣಯಿಸಿದ್ದು ಖಂಡನೀಯ. 19 ದಿನಗಳ ಕಾಲ ನೀರು ಇಲ್ಲದ ಕಾರಣ ನೀರಾವರಿ ವ್ಯಾಪ್ತಿಯಲ್ಲಿ ಸಕಾಲಕ್ಕೆ ಮೆಣಸಿನಕಾಯಿ ಬೆಳೆಗೆ ನೀರು ಸಿಗದೇ ಒಣಗುವ ಸಂಭವವಿದೆ. ಲಿಂಗಸೂಗೂರು ಹಾಗೂ ದೇವದುರ್ಗ ತಾಲ್ಲೂಕಿನಲ್ಲಿ ಹೆಚ್ಚು ಮೆಣಸಿನಕಾಯಿ ಬೆಳೆಯಲಾಗಿದ್ದು ಬೆಳೆಗೆ ನೀರಿನ ಹೆಚ್ಚು ಅಗತ್ಯವಿದೆ ಎಂದು ಹೇಳಿದರು.