ರಾಯಚೂರು: ನಗರದಲ್ಲಿ ಪತ್ರಿಕೆಗಳನ್ನು ವಿತರಣೆ ಮಾಡುವವರಿಗೆ ಮತ್ತು ಹಾಕರ್ಸ್ಗಳಿಗೆ ಜಿಲ್ಲಾಡಳಿತದಿಂದ ಕೇಂದ್ರ ಬಸ್ ನಿಲ್ದಾಣ ಎದುರು ಬುಧವಾರ ಗುರುತಿನ ಚೀಟಿಗಳನ್ನು ವಿತರಿಸಲಾಯಿತು.
ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯವರು ಕೈ ಗವುಸು ವಿತರಿಸಿದರು. ಹಮ್ರಾಜ್ ಟೈಲರ್ ಅವರಿಂದ ಉಚಿತವಾಗಿ ಮುಖಗವುಸು ವಿತರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ. ವೇದಮೂರ್ತಿ ಅವರು ಸಾಂಕೇತಿಕವಾಗಿ ಕೆಲವರಿಗೆ ಮುಖಗವುಸು, ಕೈಗವುಸು ವಿತರಿಸಿ,ಪತ್ರಿಕಾ ವಿತರಕರು ಅನುಸರಿಸಬೇಕಾದ ನಿಯಮಗಳನ್ನು ಮನವರಿಕೆ ಮಾಡಿದರು. ಬೆಳಿಗ್ಗೆ 5 ರಿಂದ 10 ಗಂಟೆಯೊಳಗಾಗಿ ಪತ್ರಿಕಾ ವಿತರಣೆ ಮುಗಿಸಿಕೊಂಡು ಮನೆಗೆ ವಾಪಸಾಗಬೇಕು ಎಂದರು. ಒಟ್ಟು 125 ಗುರುತಿನ ಚೀಟಿ ನೀಡಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ತಿವಳಿಕೆ ನೀಡಲಾಯಿತು.
ವಾರ್ತಾ ಇಲಾಖೆಯ ಹಿರಿಯ ಉಪನಿರ್ದೇಶಕ ರವಿರಾಜ, ಪತ್ರಿಕಾ ಏಜೆಂಟ್ರಾದ ಬಸಪ್ಪ ಹಳ್ಳಿ, ಮುನಿರೆಡ್ಡಿ, ಚಂದ್ರು, ಮಲ್ಲೇಶ ಇದ್ದರು.