<p><strong>ಮುದಗಲ್</strong>: ಸಮೀಪದ ನಾಗಲಾಪುರ ಗ್ರಾಮ ಪಂಚಾಯಿತಿಯಲ್ಲಿ 1800 ನರೇಗಾ ಕೂಲಿ ಕಾರ್ಮಿಕರಿಗೆ ಕೂಲಿ ಪಾವತಿಯಾಗದೇ ನಿರ್ಲಕ್ಷ್ಯ ತೋರಿದ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನರೇಗಾ ಕೂಲಿಕಾರರು ಅನಿರ್ಧಿಷ್ಟಾವಧಿ ಇರುವದಕ್ಕೆ ಧರಣಿ ನಡೆಸಿದರು.</p>.<p>ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ನೀಡಿದ ಭರವಸೆ ಈಡೇರಿಲ್ಲ. ಕೂಲಿ ಕಾರ್ಮಿಕರು, ಕೂಲಿಗಾಗಿ ಪಂಚಾಯಿತಿಗೆ ಅಲೆದಾಡುವಂತಾಗಿದೆ. ಪಂಚಾಯಿತಿ ಅಧ್ಯಕ್ಷರನ್ನು ಕೂಲಿ ನೀಡಲು ಕೇಳಿದರೆ ನಕಲಿ ಕೂಲಿ ಕಾರ್ಮಿಕರಿದ್ದಾರೆ. ಅದಕ್ಕಾಗಿ ತಡೆ ಹಿಡಿಯಲಾಗಿದೆ. ಅಲ್ಲದೇ ಪ್ರತಿ ಕೂಲಿ ಕಾರ್ಮಿಕರಿಂದ ₹100 ಸಂಗ್ರಹಿಸಿ ಕೊಟ್ಟರೇ ಕೂಲಿ ನೀಡುವುದಾಗಿ ಹೇಳಿ ಬೇಡಿಕೆ ಇಟ್ಟಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.</p>.<p>ಪಂಚಾಯತಿ ವ್ಯಾಪ್ತಿಯ ವ್ಯಾಕರನಾಳ, ನಾಗಲಾಪುರ, ಹೆಗ್ಗಾಪುರ ಸೇರಿದಂತೆ ವಿವಿಧ ಗ್ರಾಮದ ಕೂಲಿ ಕಾರ್ಮಿಕರು ಕೂಲಿ ಪಾವತಿಸುವಂತೆ ಒತ್ತಾಯಿಸಿ ಗುರುವಾರದಿಂದ ಅನಿರ್ಧಿಷ್ಠಾವಧಿ ಧರಣಿಯನ್ನು ಆರಂಭಿಸಿದ್ದಾರೆ. ಧರಣಿ ನಿರತರು ಕೂಲಿ ಪಾವತಿಯಾಗುವವರೆಗೆ ಧರಣಿಯನ್ನು ಹಿಂಪಡೆಯುವುದಿಲ್ಲ ಎಂದರು.</p>.<p>ಕೂಲಿಕಾರ್ಮಿಕರಾದ ಹನುಮಂತ ಚಲವಾದಿ, ಬೀರಪ್ಪ ಪೂಜಾರಿ, ಛತ್ರಪ್ಪ ನಾಗಲಾಪುರ, ವೀರೇಶ ವ್ಯಾಕರನಾಳ, ಹನುಮಂತ ಹೆಗ್ಗಾಪುರ, ಶಂಕರಗೌಡ, ತಿಮ್ಮನಗೌಡ ವ್ಯಾಕರನಾಳ ಸೇರಿದಂತೆ ನೂರಾರು ಕೂಲಿ ಕಾರ್ಮಿಕರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುದಗಲ್</strong>: ಸಮೀಪದ ನಾಗಲಾಪುರ ಗ್ರಾಮ ಪಂಚಾಯಿತಿಯಲ್ಲಿ 1800 ನರೇಗಾ ಕೂಲಿ ಕಾರ್ಮಿಕರಿಗೆ ಕೂಲಿ ಪಾವತಿಯಾಗದೇ ನಿರ್ಲಕ್ಷ್ಯ ತೋರಿದ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ನರೇಗಾ ಕೂಲಿಕಾರರು ಅನಿರ್ಧಿಷ್ಟಾವಧಿ ಇರುವದಕ್ಕೆ ಧರಣಿ ನಡೆಸಿದರು.</p>.<p>ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು ನೀಡಿದ ಭರವಸೆ ಈಡೇರಿಲ್ಲ. ಕೂಲಿ ಕಾರ್ಮಿಕರು, ಕೂಲಿಗಾಗಿ ಪಂಚಾಯಿತಿಗೆ ಅಲೆದಾಡುವಂತಾಗಿದೆ. ಪಂಚಾಯಿತಿ ಅಧ್ಯಕ್ಷರನ್ನು ಕೂಲಿ ನೀಡಲು ಕೇಳಿದರೆ ನಕಲಿ ಕೂಲಿ ಕಾರ್ಮಿಕರಿದ್ದಾರೆ. ಅದಕ್ಕಾಗಿ ತಡೆ ಹಿಡಿಯಲಾಗಿದೆ. ಅಲ್ಲದೇ ಪ್ರತಿ ಕೂಲಿ ಕಾರ್ಮಿಕರಿಂದ ₹100 ಸಂಗ್ರಹಿಸಿ ಕೊಟ್ಟರೇ ಕೂಲಿ ನೀಡುವುದಾಗಿ ಹೇಳಿ ಬೇಡಿಕೆ ಇಟ್ಟಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.</p>.<p>ಪಂಚಾಯತಿ ವ್ಯಾಪ್ತಿಯ ವ್ಯಾಕರನಾಳ, ನಾಗಲಾಪುರ, ಹೆಗ್ಗಾಪುರ ಸೇರಿದಂತೆ ವಿವಿಧ ಗ್ರಾಮದ ಕೂಲಿ ಕಾರ್ಮಿಕರು ಕೂಲಿ ಪಾವತಿಸುವಂತೆ ಒತ್ತಾಯಿಸಿ ಗುರುವಾರದಿಂದ ಅನಿರ್ಧಿಷ್ಠಾವಧಿ ಧರಣಿಯನ್ನು ಆರಂಭಿಸಿದ್ದಾರೆ. ಧರಣಿ ನಿರತರು ಕೂಲಿ ಪಾವತಿಯಾಗುವವರೆಗೆ ಧರಣಿಯನ್ನು ಹಿಂಪಡೆಯುವುದಿಲ್ಲ ಎಂದರು.</p>.<p>ಕೂಲಿಕಾರ್ಮಿಕರಾದ ಹನುಮಂತ ಚಲವಾದಿ, ಬೀರಪ್ಪ ಪೂಜಾರಿ, ಛತ್ರಪ್ಪ ನಾಗಲಾಪುರ, ವೀರೇಶ ವ್ಯಾಕರನಾಳ, ಹನುಮಂತ ಹೆಗ್ಗಾಪುರ, ಶಂಕರಗೌಡ, ತಿಮ್ಮನಗೌಡ ವ್ಯಾಕರನಾಳ ಸೇರಿದಂತೆ ನೂರಾರು ಕೂಲಿ ಕಾರ್ಮಿಕರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>