<p><strong>ರಾಯಚೂರು</strong>: ‘ಪ್ರಜಾ ಪ್ರಭುತ್ವದ ಕಲ್ಪನೆ ಇಟ್ಟುಕೊಂಡು ಅನುಭವ ಮಂಟಪ ಎಂಬ ಸಂಸತ್ತಿನಲ್ಲಿ ವಚನಗಳ ಪ್ರಸ್ತುತಿ ಆಗುತ್ತಿತ್ತು. ಹಾಗಾಗಿ ಭಾರತವೇ ಜಗತ್ತಿನ ಪ್ರಜಾಪ್ರಭುತ್ವದ ಪಿತಾಮಹ ಎಂದು ಪ್ರತಿಪಾದಿಸಬಹುದಾಗಿದೆ‘ ಎಂದು ಏಮ್ಸ್ ಹೋರಾಟಗಾರ ಬಸವರಾಜ್ ಕಳಸದ ಅಭಿಪ್ರಾಯಪಟ್ಟರು.</p>.<p>ಮಾರುತಿ ನಗರದ ಶ್ರೀಗಿರಿ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ 43ನೇ ಶಿವಾನುಭವ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಹನ್ನೆರಡನೇ ಶತಮಾನದಲ್ಲೇ ಶಿವ ಶರಣರು ಅನುಭವ ಮಂಟಪದಲ್ಲಿ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕೆಲಸವನ್ನು ತಮ್ಮ ವಚನಗಳ ಮೂಲಕ ಮಾಡಿದ್ದಾರೆ‘ ಎಂದು ತಿಳಿಸಿದರು.</p>.<p>‘ಶರಣರು ವಿಶ್ವಗುರು ಬಸವಣ್ಣ ರಾದಿಯಾಗಿ ಅನುಭವ ಮಂಟಪದಲ್ಲಿ ಶರಣರ ವಚನಗಳಿಂದ ಸಮಾಜದ ಸುಧಾರಣೆಗೆ ಅನುಕೂಲವಾಗುವ ಕೆಲಸ ಆಗುತ್ತಿತ್ತು. ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದ ಆಶಯಗಳು ಕೂಡ ಒಂದೇ ಆಗಿದೆ‘ ಎಂದು ತಿಳಿಸಿದರು.</p>.<p>‘ಭಾರತದ ಸಂಸ್ಕೃತಿ ಮೌಲ್ಯಗಳು ಜಗತ್ತಿಗೆ ದಾರಿ ದೀಪವಾಗಿವೆ. ಭಾರತ ಶಾಂತಿ ಸಹನೆಗೆ ಹೆಸರಾಗಿದೆ’ ಎಂದು ಹೇಳಿದರು.</p>.<p>ನಿವೃತ್ತ ಪ್ರಾಚಾರ್ಯ ದೇವರೆಡ್ಡಿ ಉಪನ್ಯಾಸ ನೀಡಿದರು. ಮಿಟ್ಟಿ ಮಲ್ಕಾಪುರ ಶಾಂತಾಶ್ರಮದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಶ್ರೀನಿವಾಸ್ ಸೋಮಶೆಟ್ಟಿ ರವಿ ಎಲೆಕ್ಟ್ರಿಕಲ್ಸ್ ಸುರೇಶ ಶಿವಶಂಕರ ಟ್ರಾಸ್ಪೋರ್ಟ್ಸ್, ಬಂಡೇಶ ವಲ್ಕಂದಿನ್ನಿ , ಕೆ.ವೇಣುಗೋಪಾಲ, ವೀರೇಶ ಕರ್ಲಿ ಉಪಸ್ಥಿತರಿದ್ದರು</p>.<p>ಮರ್ಲಿಂಗಪ್ಪ ಸ್ವಾಗತಿಸಿದರು. ಕರಿಯಪ್ಪ ಪ್ರಾರ್ಥಿಸಿದರು. ಭೀಮಣ್ಣ ಗಂಗವಾರ್ ಕಾರ್ಯಕ್ರಮ ನಿರೂಪಿಸಿದರು. ರಾಮಣ್ಣ ಮ್ಯಾದರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ‘ಪ್ರಜಾ ಪ್ರಭುತ್ವದ ಕಲ್ಪನೆ ಇಟ್ಟುಕೊಂಡು ಅನುಭವ ಮಂಟಪ ಎಂಬ ಸಂಸತ್ತಿನಲ್ಲಿ ವಚನಗಳ ಪ್ರಸ್ತುತಿ ಆಗುತ್ತಿತ್ತು. ಹಾಗಾಗಿ ಭಾರತವೇ ಜಗತ್ತಿನ ಪ್ರಜಾಪ್ರಭುತ್ವದ ಪಿತಾಮಹ ಎಂದು ಪ್ರತಿಪಾದಿಸಬಹುದಾಗಿದೆ‘ ಎಂದು ಏಮ್ಸ್ ಹೋರಾಟಗಾರ ಬಸವರಾಜ್ ಕಳಸದ ಅಭಿಪ್ರಾಯಪಟ್ಟರು.</p>.<p>ಮಾರುತಿ ನಗರದ ಶ್ರೀಗಿರಿ ಅಭಯ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ 43ನೇ ಶಿವಾನುಭವ ಚಿಂತನ ಗೋಷ್ಠಿಯಲ್ಲಿ ಅವರು ಮಾತನಾಡಿದರು.</p>.<p>‘ಹನ್ನೆರಡನೇ ಶತಮಾನದಲ್ಲೇ ಶಿವ ಶರಣರು ಅನುಭವ ಮಂಟಪದಲ್ಲಿ ಸಮಾಜದಲ್ಲಿನ ಅಂಕು ಡೊಂಕುಗಳನ್ನು ತಿದ್ದುವ ಕೆಲಸವನ್ನು ತಮ್ಮ ವಚನಗಳ ಮೂಲಕ ಮಾಡಿದ್ದಾರೆ‘ ಎಂದು ತಿಳಿಸಿದರು.</p>.<p>‘ಶರಣರು ವಿಶ್ವಗುರು ಬಸವಣ್ಣ ರಾದಿಯಾಗಿ ಅನುಭವ ಮಂಟಪದಲ್ಲಿ ಶರಣರ ವಚನಗಳಿಂದ ಸಮಾಜದ ಸುಧಾರಣೆಗೆ ಅನುಕೂಲವಾಗುವ ಕೆಲಸ ಆಗುತ್ತಿತ್ತು. ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನದ ಆಶಯಗಳು ಕೂಡ ಒಂದೇ ಆಗಿದೆ‘ ಎಂದು ತಿಳಿಸಿದರು.</p>.<p>‘ಭಾರತದ ಸಂಸ್ಕೃತಿ ಮೌಲ್ಯಗಳು ಜಗತ್ತಿಗೆ ದಾರಿ ದೀಪವಾಗಿವೆ. ಭಾರತ ಶಾಂತಿ ಸಹನೆಗೆ ಹೆಸರಾಗಿದೆ’ ಎಂದು ಹೇಳಿದರು.</p>.<p>ನಿವೃತ್ತ ಪ್ರಾಚಾರ್ಯ ದೇವರೆಡ್ಡಿ ಉಪನ್ಯಾಸ ನೀಡಿದರು. ಮಿಟ್ಟಿ ಮಲ್ಕಾಪುರ ಶಾಂತಾಶ್ರಮದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.</p>.<p>ಶ್ರೀನಿವಾಸ್ ಸೋಮಶೆಟ್ಟಿ ರವಿ ಎಲೆಕ್ಟ್ರಿಕಲ್ಸ್ ಸುರೇಶ ಶಿವಶಂಕರ ಟ್ರಾಸ್ಪೋರ್ಟ್ಸ್, ಬಂಡೇಶ ವಲ್ಕಂದಿನ್ನಿ , ಕೆ.ವೇಣುಗೋಪಾಲ, ವೀರೇಶ ಕರ್ಲಿ ಉಪಸ್ಥಿತರಿದ್ದರು</p>.<p>ಮರ್ಲಿಂಗಪ್ಪ ಸ್ವಾಗತಿಸಿದರು. ಕರಿಯಪ್ಪ ಪ್ರಾರ್ಥಿಸಿದರು. ಭೀಮಣ್ಣ ಗಂಗವಾರ್ ಕಾರ್ಯಕ್ರಮ ನಿರೂಪಿಸಿದರು. ರಾಮಣ್ಣ ಮ್ಯಾದರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>