<p>ಸಿಂಧನೂರು: ಸೌಹಾರ್ದ ಸಹಕಾರಿಗಳಿಗೆ ಆರ್ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡುವಂತೆ ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಒತ್ತಾಯಿಸಿದರು.</p>.<p>ನಗರದ ಕನಕದಾಸ ಕಲ್ಯಾಣ ಮಂಪಟದಲ್ಲಿ ಈಚೆಗೆ ನಡೆದ ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ನಾಲ್ಕನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಆರ್ಡಿಸಿಸಿ ಬ್ಯಾಂಕಿನಲ್ಲಿ ಷೇರುದಾರರಾಗಿದ್ದರೂ ವಾರ್ಷಿಕ ಸಾಮಾನ್ಯ ಮಹಾಸಭೆಗಳಿಗೆ ಹಾಜರಾಗಿಲ್ಲ ಎನ್ನುವ ನೆಪಹೊಡ್ಡಿ ಉದ್ದೇಶ ಪೂರ್ವಕವಾಗಿಯೇ ಮತದಾನದ ಹಕ್ಕು ಕೊಡುತ್ತಿಲ್ಲ. ತುಂಗಭದ್ರ ಪತ್ತಿನ ಸೌಹಾರ್ದದಿಂದ ತಾವೇ ಎರಡು ಬಾರಿ ಸಾಮಾನ್ಯ ಮಹಾಸಭೆಗೆ ಹಾಜರಾಗಿದ್ದು, ತಮಗೆ ಮತದಾನದ ಹಕ್ಕು ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಪ್ರಯೋಜನವಾಗಿಲ್ಲ. ಇಂತಹ ಸಮಸ್ಯೆಗಳಿಗೆ ಸೌಹಾರ್ದ ಸಹಕಾರಿ ಒಕ್ಕೂಟದ ಮೂಲಕ ಗಟ್ಟಿಧ್ವನಿ ಎತ್ತಬೇಕಿದೆ. ಅಲ್ಲದೇ ರಾಜ್ಯಮಟ್ಟದ ಮಹಾಮಂಡಳ ಗಮನಕ್ಕೂ ತರಲಾಗುವುದು ಎಂದರು.</p>.<p>ನಿರ್ದೇಶಕ ರಾಜಶೇಖರ ಬಿ. ಮಾತನಾಡಿ, ಸಹಕಾರಿಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ಪದೇ ಪದೇ ನೋಟಿಸ್ ನೀಡಿ ತೊಂದರೆ ಕೊಡುತ್ತಿದೆ. ಈ ಬಗ್ಗೆ ಏನಾದರೂ ಮಾತನಾಡಿದರೆ ಕೋರ್ಟ್ಗೆ ಹೋಗಿ ಎಂದು ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಸಮಯವೇ ನೀಡದೇ ಏನೇನೋ ಮಾಹಿತಿ ಕೇಳುತ್ತಾರೆ. ಸಕಾಲದಲ್ಲಿ ನೀಡದಿದ್ದರೆ ಮತ್ತೊಂದು ನೋಟೀಸ್ ಕೊಡುತ್ತಾರೆ. ಇದರ ವಿರುದ್ದ ಸಂಘಟಿತ ಹೋರಾಟ ಮಾಡಬೇಕಿದೆ ಎಂದರು.</p>.<p>ಆರ್ಡಿಸಿಸಿ ಬ್ಯಾಂಕ್ಗೆ ಷೇರು ನೀಡುವ ಮೂಲಕ ಸದಸ್ಯರಾಗಬಹುದು. ಸತತ ಮೂರು ಬಾರಿ ಸಾಮಾನ್ಯ ಮಹಾಸಭೆಗಳಿಗೆ ಹಾಜರಾಗಿ ಹಾಜರಾದ ಪತ್ರವಿದ್ದರೆ ಮತದಾನದ ಹಕ್ಕ ತಿರಸ್ಕರಿಸಲು ಬರುವದಿಲ್ಲ. ಈ ಬಗ್ಗೆ ಎಲ್ಲಾ ಸಹಕಾರಿಗಳು ಗಮನ ಹರಿಸಬೇಕು ಎಂದರು.</p>.<p>ನಿರ್ದೇಶಕ ನಲ್ಲಾ ವೆಂಕಟೇಶ್ವರರಾವ್ ವಾರ್ಷಿಕ ಸಾಮಾನ್ಯಸಭೆಯ ನೋಟಿಸ್ ಓದಿ ದಾಖಲಿಸಿದರು. ನಿರ್ದೇಶಕರಾದ ಅಂದಾನಪ್ಪ ಗುಂಡಳ್ಳಿ, ಚುಕ್ಕಿ ಸೂಗಪ್ಪ ಸಾಹುಕಾರ, ಹೆಚ್.ಕುಮಾರೆಪ್ಪ, ಈಶ್ವರಪ್ಪ ನಾಗಲೀಕರ, ಮಲ್ಲನಗೌಡ ಪಾಟೀಲ್, ಅಮರೇಗೌಡ ನಕ್ಕುಂದಿ, ಬಸವರಾಜ ಆರ್.ಮಾನವಿ, ಲಿಂಗರಾಜ ಪಾಟೀಲ್, ಪ್ರಬಾರಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಹುಸೇನಸಾಬ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಿಂಧನೂರು: ಸೌಹಾರ್ದ ಸಹಕಾರಿಗಳಿಗೆ ಆರ್ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡುವಂತೆ ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ಅಧ್ಯಕ್ಷ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಒತ್ತಾಯಿಸಿದರು.</p>.<p>ನಗರದ ಕನಕದಾಸ ಕಲ್ಯಾಣ ಮಂಪಟದಲ್ಲಿ ಈಚೆಗೆ ನಡೆದ ರಾಯಚೂರು ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟದ ನಾಲ್ಕನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಆರ್ಡಿಸಿಸಿ ಬ್ಯಾಂಕಿನಲ್ಲಿ ಷೇರುದಾರರಾಗಿದ್ದರೂ ವಾರ್ಷಿಕ ಸಾಮಾನ್ಯ ಮಹಾಸಭೆಗಳಿಗೆ ಹಾಜರಾಗಿಲ್ಲ ಎನ್ನುವ ನೆಪಹೊಡ್ಡಿ ಉದ್ದೇಶ ಪೂರ್ವಕವಾಗಿಯೇ ಮತದಾನದ ಹಕ್ಕು ಕೊಡುತ್ತಿಲ್ಲ. ತುಂಗಭದ್ರ ಪತ್ತಿನ ಸೌಹಾರ್ದದಿಂದ ತಾವೇ ಎರಡು ಬಾರಿ ಸಾಮಾನ್ಯ ಮಹಾಸಭೆಗೆ ಹಾಜರಾಗಿದ್ದು, ತಮಗೆ ಮತದಾನದ ಹಕ್ಕು ನೀಡಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ವಿಚಾರಿಸಿದರೆ ಪ್ರಯೋಜನವಾಗಿಲ್ಲ. ಇಂತಹ ಸಮಸ್ಯೆಗಳಿಗೆ ಸೌಹಾರ್ದ ಸಹಕಾರಿ ಒಕ್ಕೂಟದ ಮೂಲಕ ಗಟ್ಟಿಧ್ವನಿ ಎತ್ತಬೇಕಿದೆ. ಅಲ್ಲದೇ ರಾಜ್ಯಮಟ್ಟದ ಮಹಾಮಂಡಳ ಗಮನಕ್ಕೂ ತರಲಾಗುವುದು ಎಂದರು.</p>.<p>ನಿರ್ದೇಶಕ ರಾಜಶೇಖರ ಬಿ. ಮಾತನಾಡಿ, ಸಹಕಾರಿಗಳಿಗೆ ಆದಾಯ ತೆರಿಗೆ ಇಲಾಖೆಯಿಂದ ಪದೇ ಪದೇ ನೋಟಿಸ್ ನೀಡಿ ತೊಂದರೆ ಕೊಡುತ್ತಿದೆ. ಈ ಬಗ್ಗೆ ಏನಾದರೂ ಮಾತನಾಡಿದರೆ ಕೋರ್ಟ್ಗೆ ಹೋಗಿ ಎಂದು ಇಲಾಖೆ ಅಧಿಕಾರಿಗಳು ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಸಮಯವೇ ನೀಡದೇ ಏನೇನೋ ಮಾಹಿತಿ ಕೇಳುತ್ತಾರೆ. ಸಕಾಲದಲ್ಲಿ ನೀಡದಿದ್ದರೆ ಮತ್ತೊಂದು ನೋಟೀಸ್ ಕೊಡುತ್ತಾರೆ. ಇದರ ವಿರುದ್ದ ಸಂಘಟಿತ ಹೋರಾಟ ಮಾಡಬೇಕಿದೆ ಎಂದರು.</p>.<p>ಆರ್ಡಿಸಿಸಿ ಬ್ಯಾಂಕ್ಗೆ ಷೇರು ನೀಡುವ ಮೂಲಕ ಸದಸ್ಯರಾಗಬಹುದು. ಸತತ ಮೂರು ಬಾರಿ ಸಾಮಾನ್ಯ ಮಹಾಸಭೆಗಳಿಗೆ ಹಾಜರಾಗಿ ಹಾಜರಾದ ಪತ್ರವಿದ್ದರೆ ಮತದಾನದ ಹಕ್ಕ ತಿರಸ್ಕರಿಸಲು ಬರುವದಿಲ್ಲ. ಈ ಬಗ್ಗೆ ಎಲ್ಲಾ ಸಹಕಾರಿಗಳು ಗಮನ ಹರಿಸಬೇಕು ಎಂದರು.</p>.<p>ನಿರ್ದೇಶಕ ನಲ್ಲಾ ವೆಂಕಟೇಶ್ವರರಾವ್ ವಾರ್ಷಿಕ ಸಾಮಾನ್ಯಸಭೆಯ ನೋಟಿಸ್ ಓದಿ ದಾಖಲಿಸಿದರು. ನಿರ್ದೇಶಕರಾದ ಅಂದಾನಪ್ಪ ಗುಂಡಳ್ಳಿ, ಚುಕ್ಕಿ ಸೂಗಪ್ಪ ಸಾಹುಕಾರ, ಹೆಚ್.ಕುಮಾರೆಪ್ಪ, ಈಶ್ವರಪ್ಪ ನಾಗಲೀಕರ, ಮಲ್ಲನಗೌಡ ಪಾಟೀಲ್, ಅಮರೇಗೌಡ ನಕ್ಕುಂದಿ, ಬಸವರಾಜ ಆರ್.ಮಾನವಿ, ಲಿಂಗರಾಜ ಪಾಟೀಲ್, ಪ್ರಬಾರಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಬಿ.ಹುಸೇನಸಾಬ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>