ಮಾನ್ವಿ: ಅಂಗವಿಕಲರ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ನೀಡಿರುವ ಹೇಳಿಕೆಯನ್ನು ಖಂಡಿಸಿ ತಾಲ್ಲೂಕು ವಿಕಲಚೇತನರ ಸಂಘಟನೆಗಳ ಒಕ್ಕೂಟದ ಸದಸ್ಯರು ಶನಿವಾರ ಉಪ ತಹಶೀಲ್ದಾರ್ ವಿರುಪಣ್ಣ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಪ್ರಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಪಕ್ಷವನ್ನು ದೂರುವ ಸಂದರ್ಭದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅವರು, ‘ಕುಂಟನಿಗೆ ಎದುರಿಗೆ ಇರುವ ಪೈಲ್ವಾನನಿಗೆ ಹೆದರಿಸುವ ಶಕ್ತಿ ಇರಲ್ಲ. ಹಾಗಾಗಿ ಸುಮ್ಮನೆ ಹೆದರಿಸಲು ಬಂದು ಒದೆಯುತ್ತೇನೆ ಎಂದು ಹೇಳುತ್ತಾನೆ‘ ಎಂದು ಹೇಳುವ ಮೂಲಕ ಅಂಗವಿಕಲರ ಬಗ್ಗೆ ಅಪಮಾನಕಾರಿಯಾಗಿ ಮಾತನಾಡಿದ್ದಾರೆ‘ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೂಡಲೆ ಕೆ.ಎಸ್.ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಬರೆದ ಪತ್ರದಲ್ಲಿ ಒತ್ತಾಯಿಸಲಾಯಿತು.
ಮಾನ್ವಿ ತಾಲ್ಲೂಕು ವಿಕಲಚೇತನರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ಶಿವಕುಮಾರ ಚಲ್ಮಲ್, ವಿ.ಎಸ್.ರಾಘವೇಂದ್ರ, ಡಿ.ಹನುಮಂತ ಕಪಗಲ್, ನಿಂಗನಗೌಡ, ಹನುಮೇಶ ಕಾತರಿಕಿ, ನರಸಪಪ್ ಚೀಕಲಪರ್ವಿ, ಮಹೇಶ ಉಮಳಿಹೊಸೂರು, ಯಲ್ಲಪ್ಪ ಬಾಗಲವಾಡ, ನಿಂಗಣ್ಣ ಮುಸ್ಟೂರು, ತಿಮ್ಮಯ್ಯ ನಾಯಕ, ಆಂಜನೇಯ ಹರವಿ, ಅಯ್ಯಪ್ಪ ಇದ್ದರು.