ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬಡ್ಡಿ ಟೂರ್ನಿ: ಸಿದ್ರಾಂಪುರ ತಂಡಕ್ಕೆ ಪ್ರಥಮ ಬಹುಮಾನ

Last Updated 30 ನವೆಂಬರ್ 2021, 10:25 IST
ಅಕ್ಷರ ಗಾತ್ರ

ಶಾಖವಾದಿ (ಶಕ್ತಿನಗರ): ಕನಕದಾಸ ಜಯಂತಿ ಪ್ರಯುಕ್ತ ಗ್ರಾಮದಲ್ಲಿ ನಡೆದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಸಿದ್ರಾಂಪುರ ಗ್ರಾಮದ ತಂಡ ಪ್ರಥಮ ಸ್ಥಾನ ಪಡೆಯಿತು. ₹15 ಸಾವಿರ ಬಹುಮಾನ ನೀಡಲಾಯಿತು.

ಶಾಖವಾದಿ ಗ್ರಾಮದ ತಂಡಕ್ಕೆ ₹10 ಸಾವಿರ ದ್ವಿತೀಯ ಬಹುಮಾನ ಹಾಗೂ ತೃತೀಯ ಸ್ಥಾನ ಪಡೆದಲಿಂಗಸುಗೂರಿನ ಕದಂಬ ತಂಡಕ್ಕೆ ₹5 ಸಾವಿರ ವಿತರಿಸಲಾಯಿತು.

ಹೀರಾಪುರ, ಬಿಜನಾಗೇರ, ಪಲ್ಕಂದೊಡ್ಡಿ, ಕೂಡ್ಲೂರು, ಪೋತಗಲ್, ಗಂಜಳ್ಳಿ, ಶಿವವಿಲಾಸನಗರ, ಮಟಮಾರಿ, ಚಿಂತಲಕುಂಟ, ಬಳಿಗೇರಾ, ಸಿಂಗನೋಡಿ, ವೈ.ಮಲ್ಲಾಪುರ, ವಡವಾಟಿ, ಶಾಖವಾದಿ, ಜಾಲಿಬೆಂಚಿ, ರಾಯಚೂರು, ಸಿದ್ರಾಂಪುರ, ಕಲ್ಲೂರು ಹಾಗೂ ತೆಲಂಗಾಣದ ಗುಡೇಬಲ್ಲೂರು ತಂಡ ಸೇರಿ ಒಟ್ಟು 27 ತಂಡಗಳು ಭಾಗವಹಿಸಿದ್ದವು.

ಬಿ.ಮಲ್ಲೇಶ ಸ್ವಾಗತಿಸಿದರು. ಭೀಮಸೇನ್ ನಿರೂಪಿಸಿದರು.

ಶಾಖವಾದಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಿಮ್ಮಕ್ಕ, ಉಪಾಧ್ಯಕ್ಷೆ ಲಕ್ಷ್ಮೀ, ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರಾದ ಪ್ರಾಣೇಶ, ಮಲ್ಲೇಶ, ನಾಗೇಶ, ನಾಗರಾಜ ಹಾಗೂ ಗ್ರಾಮದ ಯುವಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT